ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಕವಿತೆ

ಮೋಡದ ಮರೆಯಲ್ಲಿ ಅಡಗಿದ ಚಂದಿರನ
ಕರೆಯುವೆ ಏಕೆ
ಕಾಡುವ ಕನಸಿನಲಿ ಒಲವಿನ ಪ್ರಿಯಕರನ
ಬೆರೆಯುವೆ ಏಕೆ

ಭಾವಗಳು ಹರಿಣಿಯಂತೆ ಕಂಗೆಟ್ಟು ಓಡುತ್ತ
ನಿಂತಿದೆಯಲ್ಲ ಇಂದು
ಹೂವಿಗೆ ದುಂಬಿಯಾಗಿ ಎದೆಯ ಬನದಲಿ
ಮೆರೆಯುವೆ ಏಕೆ

ಹೊನ್ನಿನ ಮಹಲಿನಲಿ ಪ್ರೇಮದ ತಲ್ಪದಲಿ
ಕಾದವಳು ನೀನು
ಸನ್ನೆಯ ಮಾಡುತ‌ ಕಂಗಳಿನ ನೋಟದಲಿ
ಕೊರೆಯುವೆ ಏಕೆ

ಗಗನದ ಅಂಚಿನಲಿ ಧೃವತಾರೆಯ ತೆರದಲಿ
ಮೂಡಲೆ ಇಲ್ಲ
ನಗುನಗುತ ನೇಹದ ನುಡಿಯಾಡಿ ಪ್ರೀತಿಯ
ಎರೆಯುವೆ ಏಕೆ

ತುಷಾರದ ಸೋನೆಯ ಹನಿಗಳಂತೆ ಅಭಿನವನ
ಪದಗಳು ಉದುರಿವೆ
ನಿಶಾಕಾಲದಿ ಸುಖದ ಸ್ವಪ್ನಗಳಲಿ ನೋವನು
ತೆರೆಯುವೆ ಏಕೆ


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top