ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ರೇಷ್ಮಾ ಕಂದಕೂರ

ಯುದ್ಧ ಪಿಪಾಸು

ಹೊತ್ತಿ ಉರಿಯುತಿದೆ ದ್ವೇಷಾಸೂಹೆ
ಬಿತ್ತಿ ಬೆಳೆವ ಶಾಂತಿ ಬೀಜ ಹೂತು ಹೋಯಿತೆ
ಗೋಳಾಟ ನರಳಾಟ
ಮಾರಣ ಹೋಮದ ಓಕುಳಿಯಲಿ.

ಸ್ವಾರ್ಥ ಪೀಪಾಸಿಗೆ ಬಲಿಯಾಗಿ
ಕತೃ ಕರ್ಮದ ಅರಿವಿಲ್ಲದೆ
ಭಾತೃ ಜಗಕೇಕೆ ಇಲ್ಲ ಜಾಗೃತಿ
ಉಸಿರಿಗೇಕೇ ಸಂಚಕಾರ.

ಸಮಪಾಲಿನ ಮಾತು ವಿಷವಾಗಿ
ದುಸ್ತರ ಬದುಕಲಿ ಆವೇಗದ ಛಾಯೆ
ಆರ್ಭಟ ಅಟ್ಟಹಾಸ ಜಗಮಗಿಸಿ
ಮೂಕ ರೋಧನೆ ತೆರೆಮರೆಯಲಿ.

ಅಪ್ಪುಗೆಗೆ ಧಾವಂತಕೆ
ಮದ್ದು ಗುಂಡುಗಳ ಹಾವಳಿ
ಮುಗ್ಧ ಮನಕೆ ಕೊಡಲಿ ಏಟು
ಯುದ್ಧವೆಂಬ ಡಂಬಾಚಾರದಿ.

ಹುಂಬುತನದ ಆಟಕೆ
ಬಲಿಯಾದ ಅರಿಯದ ಜೀವಿಗಳು
ಕೇಳುವವರಿಲ್ಲದ ಸ್ಥಿತಿಗೆ
ಬರೆಎಳೆದ ಕರಿನೆರಳು.

ಬುದ್ಧಿ ವಂತ ಮನುಜ ನೀ ಸಿದ್ಧಿಸದ್ದೇನು
ಗದ್ದುಗೆಗೆ ಗುದ್ದಾಟ ಕಿರೀಟವೆ
ಭದ್ಧತೆಯ ಜೀವನಕೆ ವೈರಸ್ ಕಾಟವೇ
ಬಿಟ್ಟು ಬಿಡು ಇನ್ನದರೂ ಬಡಜೀವಕೆ.


ರೇಷ್ಮಾ ಕಂದಕೂರ

About The Author

Leave a Reply

You cannot copy content of this page

Scroll to Top