ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಮತಾ ಕೆ

ದುಗುಡ ಮರೆಯಾಗಿದೆ

ಅವಿತು ಕುಳಿತಿಹ ಮನದ ಭಾವದ
ಕರಗಳ ಅಂದವ ನಾ ಹೇಗೆ ಅರಿಯಲಿ..
ರಂಗೋಲಿಯ ಓಕುಳಿ ಚೆಲ್ಲಿದ
ಹೆಂಗಳೆಯರ ಮನದ ಮುದದಿ

ಸೌಂದರ್ಯ ಲಹರಿಯು ನಿನ್ನ ರೂಪಕೆ
ಗಗನದಿ ಜನಿಸಿದ ರವಿಯ ಚೆಲುವಿಕೆ
ಮಂದಾರವಿದು ಎನ್ನ ಮನ ಸಾಕ್ಷಿ ಗೆ
ನೀ ಅವಿತಿರುವೆ ಚೆಲುವೆ ಬಣ್ಣದೊಳಗೆ

ಕರೆದಾಗ ಬರುವಿಯೆಂದು ಓಕುಳಿಯಾಟಕೆ
ಬರಲಿಲ್ಲ ಇನ್ನು ನಿನ್ನ ನನ್ನ ರಂಗಿನಾಟಕೆ
ಮನದ ಮೌನವ‌ ಮುರಿದು ಬಿಡು ಚಿನ್ನಾ
ಹಟವ ತೊರೆದು ಬಾ ರಂಗಿನ ಮೆರವಣಿಗೆಗೆ

ನೀ ಬರುವ ದಾರಿಯಲಿ ಹೂವ ಚೆಲ್ಲಿದೆ
ಕಾಲಿನ ಗೆಜ್ಜೆಯ ನಾದಕೆ ಮನವರಳಿದೆ
ರಂಗಿನ ಬಣ್ಣದಲಿ ಹೂವಿನ ಮಳೆಸುರಿದಿದೆ
ಮನದ ದುಗುಡವು ಬಣ್ಣದಲಿ ಮರೆಯಾಗಿದೆ..


ಮಮತಾ ಕೆ


About The Author

Leave a Reply

You cannot copy content of this page

Scroll to Top