ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ರಾಜ್ಯೋತ್ಸವ ವಿಶೇಷ

ಪ್ರಭಾ ಅಶೋಕ ಪಾಟೀಲ

ಕನ್ನಡ ನುಡಿ

ಹಾಲ ಜೇನು ಸುರಿದಂತೆ
ರಸ ಕಾವ್ಯ ರಸಧಾರೆ ಯಂತೆ
ಅಕ್ಷರಗಳ ಸರಮಾಲೆ
ಮುತ್ತು ಹವಳ ರತ್ನದಂತೆ

ವ್ಯಂಜನಗಳ ಉದ್ಗಾರವು
ಸ್ವರಗಳಲ್ಲಿ ಜೇಂಕಾರವು
ನುಡಿಯಲು ಸಾಕ್ಷಾತ್ಕಾರ ವು
ಕರುನಾಡಿಗೆ ಸಿಂಗಾರ ವು

ಸುಸಲಿತ ಸುರಳಿತ ನುಡಿಯು
ಕವಿ ದಿಗ್ಗಜರ ಕಣ್ಮಣಿಯು
ಜ್ಞಾನಾರ್ಜನೆಗೆ ಸಾಗರ ವು
ಬಾ ರಿಸಿದೆ ಕನ್ನಡ ಡಿಂಡಿಮವು

ಮಗುವ ತೊದಲನುಡಿಯಲ್ಲಿ
ಪ್ರೇಮಿಗಳ ಒಲವಧಾರೆಯಲಿ
ಅಮ್ಮನ ವಾತ್ಸಲ್ಯದ ಅಲೆಯಲಿ
ಕನ್ನಡದ ಕಂಪಿನ ಸುಳಿಯಲಿ

ಕನ್ನಡವಾಗಲಿ ನಮ್ಮಸಿರು
ಜೀವನಕದುವೇ ಹಸಿರು
ತಾಯಿ ಭುವನೇಶ್ವರಿಯ ಮರೆಯದಿರು
ಕನ್ನಡತನವ ತೊರೆಯದಿರು


ಪ್ರಭಾ ಅಶೋಕ ಪಾಟೀಲ

About The Author

Leave a Reply

You cannot copy content of this page

Scroll to Top