ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ರಾಮಮನೋಹರ ಲೋಹಿಯಾ

ಇದ್ದನೊಬ್ಬ ನಮ್ಮ ದೇಶದಿ
ರೈತ ಬಡವರ ಮಿತ್ರನು
ಶ್ರಮದ ಸಂಸ್ಕೃತಿ ದೇಶ ಭಕ್ತಿ
ನಾಡು ನುಡಿಗೆ ದುಡಿದನು

ಸತ್ಯ ಸಮತೆ ಶಾಂತಿ ಮಂತ್ರ
ಗಾಂಧಿ ಚರಕದ ಚಕ್ರವು
ಕ್ರಾಂತಿ ಚಳುವಳಿ ದಂಗೆ ಎದ್ದನು
ದೇಶ ಉದಯ ಸ್ವತಂತ್ರವು

ಲೆಕ್ಕ ಕೇಳಿದ ಪ್ರಧಾನಿಯನ್ನು
ನಾಯಿಗೆ ಮಾಡುವ ಖರ್ಚು
ತಿನ್ನಲಿಲ್ಲ ಅನ್ನ ಗಂಜಿ
ಏಕೆ ವ್ಯರ್ಥ ವೆಚ್ಚು ?

ಸಮಾಜವಾದ ಮೂಲ ತತ್ವ
ಜೈಲು ಕಂಡ ಯೋಧನು
ರಾಷ್ಟ್ರ ಪ್ರೀತಿ ತನ್ನ ಉಸಿರು
ದೇಶವಾಯಿತು ನಿತ್ಯ ಹಸಿರು

ರಾಮ ಕೃಷ್ಣ ಓದಿಕೊಂಡ
ತಾನು ಬ್ರಹ್ಮಚರ್ಯನು
ಹಾಸ್ಯ ವಿನೋದ ಮೂರ್ತಿ ಭಂಜಕ
ದೇಶಕ್ಕಾಗಿ ಮಡಿದನು

ಸಂತೆಯೊಳಗಿನ ಸಂತ ಪುರುಷ

ರಾಮಮನೋಹರ ಲೋಹಿಯಾ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

Leave a Reply

You cannot copy content of this page

Scroll to Top