ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಜಾತಾ ಪಾಟೀಲ ಸಂಖ

‘ದೇಶಪ್ರೇಮ ಹೃದಯಗಳಲ್ಲಿ ಅರಳಲಿ’

 ಆಗಸ್ಟ್ 15  ಸ್ವಾತಂತ್ರ್ಯೋತ್ಸವ
ಎಲ್ಲೆಲ್ಲೂ ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ – *ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ……
ತುಂಬಾ ಸಂತೋಷ……
ಆದರೆ,
ಸೂಕ್ಷ್ಮವಾಗಿ ಗಮನಿಸಿ ನೀವು ಕೂಡ

ನೆನಪಿಡಿ……… ಭಾರತೀಯರೇ
ಇದೇ ಬಾಯಿಗಳೇ ಇಂದು  ದ್ವೇಷ ಕಾರುವ ರಕ್ತ ಹೀರುವ ಸಮಾಜ ಒಡೆಯುವ ಘೋಷಣೆ ಕೂಗುವುದು…..
ಇದೇ ಕಣ್ಣುಗಳೇ  ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು….
ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆ ಕೈಚಾಚುವುದು…..
ಇದೇ ಕಾಲುಗಳೇ ಹಣ ಹೆಂಡ ಪಡೆದು ಮತದಾನ ಕೇಂದ್ರಕ್ಕೆ  ಸಾಗುವುದು….
ಅತ್ಯಾಚಾರದ ಕಡೆ ಹೆಜ್ಜೆ ಹಾಕುವುದು……

ಇದೇ ಮನಸ್ಸುಗಳೇ ಇಂದು ದೇಶದಲ್ಲಿ ಅರಾಜಕತೆ ಅಸಹಿಷ್ಣತೆ ಉಂಟುಮಾಡುತ್ತಿರುವುದು…
ಇದೇ ಜನರೇ ದೇಶದ ಕೆಲವು ಭಾಗಗಳಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡುವುದು…….

ಇನ್ನೂ ಕೆಲವು ಸೂಕ್ಷ್ಮ ಸಂಗತಿಗಳಿವೆ …… ನೋಡೋಣ ಬನ್ನಿ…..
ಇಡೀ ದೇಶದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆಯಿಂದ ವಿಧಾನಸಭೆಗಳವರೆಗೆ,
ಜಮೀನು ನೋಂದಣಿ ಕಚೇರಿಯಿಂದ ಮರಣ ನೋಂದಣಿ ಕಚೇರಿಯವರೆಗೆ ಲಂಚವಿಲ್ಲದೆ ಕೆಲಸವಾಗುವುದು ಅಪರೂಪ. ಅನಧಿಕೃತ ಲಂಚದ ದರಪಟ್ಟಿಯೇ ಇದೆ……

ಒಡವೆ ಧರಿಸಿದ ಒಂಟಿ ಹೆಣ್ಣು ಇಲ್ಲಿ ಸುರಕ್ಷಿತ ಎಂದು ಹೇಳುವ ಒಂದೇ ಒಂದು ಜನನಿಬಿಡ ಪ್ರದೇಶ, ಬಸ್ ನಿಲ್ದಾಣ, ಅಥವಾ ರೈಲು ನಿಲ್ದಾಣವನ್ನು ತೋರಿಸಿ……
ಕಾನೂನು ತಜ್ಞರ ಸಲಹೆ ಪಡೆಯದೆ ಕೇವಲ ನಂಬಿಕೆಯ ಆಧಾರದ ಮೇಲೆ 

ಮನೆ ಅಥವಾ ಜಮೀನು ಖರೀದಿಸುವ ಧೈರ್ಯ ಎಷ್ಟು ಜನರಿಗಿದೆ…….
ಒಂದು ಕಡೆ ಡ್ರಗ್ ಮಾಫಿಯಾ, ಇನ್ನೊಂದು ಕಡೆ  ಲ್ಯಾಂಡ್ ಮಾಫಿಯಾ, 

ಕ್ಯಾಪಿಟೇಷನ್ ಮಾಫಿಯಾ, ಶುಗರ್ ಮಾಫಿಯಾ, ಗಣಿ ಮಾಫಿಯಾ, 

ವಾಟರ್ ಮಾಫಿಯಾ ಜೊತೆಗೆ ಜಾತಿ, ವರ್ಗ ವರ್ಣ ಭೇದ ಮಾಡುವ ಮುಂತಾದ 

ವಿಭಜಕ ಶಕ್ತಿಗಳು ಇಡೀ ಆಡಳಿತ ಯಂತ್ರವನ್ನು ನಿಯಂತ್ರಿಸುತ್ತಿವೆ…….

ಆದರೆ ‌ದೇಶಭಕ್ತಿ ಮಾತ್ರ ಉಕ್ಕಿ ಹರಿಯುತ್ತದೆ…..
ದೇಶಭಕ್ತಿ ಕೇವಲ ಘೋಷಣೆಯಲ್ಲ. ಅದು ನಡವಳಿಕೆ.
ದುರುಳ ನಾಯಕರಿಂದ ಮಕ್ಕಳಿಗೆ ಶಾಲೆಯಲ್ಲಿ ನೀತಿ ಪಾಠ ಹೇಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರೆ 

ಆ ಕಪಟತನದ ಮುಖವಾಡ ಮುಂದೆ ಮಕ್ಕಳಿಗೆ ತಿಳಿಯುವುದಿಲ್ಲವೇ ?…..

ನುಡಿದಂತೆ ನಡೆಯಿರಿ
ಇಲ್ಲವೇ
ನಡೆದಂತೆ ನುಡಿಯಿರಿ,‌ ಅದೇ ದೇಶಪ್ರೇಮ……

ಸರಳತೆ ಸಭ್ಯತೆ ಪ್ರೀತಿ ವಿಶ್ವಾಸವಿಲ್ಲದ ಪೇಪರ ಪ್ರಚಾರಕರೋ…… ಟಿವಿ ಪ್ರಚಾರಕರೋ …….ಆಗಿ ಒಣ ಸಿದ್ಧಾಂತ  ಹೇಳುತ್ತಾ ಪ್ರಚಾರದ ಹಂಗಿಗೆ ಬಿದ್ದು ಬುದ್ದಿವಂತರೆಂಬ ಭ್ರಮೆಗೆ ಒಳಗಾಗಿ ವ್ಯಕ್ತಿತ್ವವೇ ಇಲ್ಲದ ಟೊಳ್ಳು ದೇಶಪ್ರೇಮ ಅಪಾಯಕಾರಿ……

ಮಾತಿನ ಅರಮನೆಯಲ್ಲಿ ಅರಳುವುದು ಮುಖವಾಡ.
ನರನಾಡಿಗಳಲ್ಲಿ ಸಮಾನತೆ ಸೌಹಾರ್ಧತೆ ಅಡಗಿರುವುದು ದೇಶಪ್ರೇಮ……

ವಂದೇ ಮಾತರಂ ಎಂದು ಕೂಗುವುದು
ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವುದು.
ವಂದೇ ಮಾತರಂ ಎನ್ನುವುದು ಮಠದಲ್ಲಿ ಪಂಕ್ತಿಬೇದ ಮಾಡುವುದು ಮತ್ತು ಅದನ್ನು ಸಮರ್ಥಿಸುವುದು.
ವಂದೇ ಮಾತರಂ ಎನ್ನುವುದು ಜಾತಿ ಹೆಸರಿನಲ್ಲಿ ಸಂಚು ,ಮೋಸ ಮಾಡುವುದು.
ವ್ಯಕ್ತಿ ಸ್ವಾತಂತ್ರ್ಯ ಗೌರವಿಸದೆ ಇನ್ನೊಬ್ಬರನ್ನು ಹಂಗಿಸುವುದು.
ಇದು ಸ್ವಾತಂತ್ರ್ಯವಲ್ಲ……….

ನಮ್ಮ ನಡವಳಿಕೆ – ವರ್ತನೆ – ದಿನನಿತ್ಯದ ಚಟುವಟಿಕೆಯೇ ನಮ್ಮ ದೇಶಪ್ರೇಮ. ಕೇವಲ ಜೈ ಭಾರತ್ ಘೋಷಣೆ ಮಾತ್ರವಲ್ಲ…..

ನಮ್ಮ ತಿಳಿವಳಿಕೆ ನಮ್ಮ ನಡವಳಿಕೆಯಾದಾಗ ಮಾತ್ರ ಸ್ವಾತಂತ್ರ್ಯೋತ್ಸವದ ಸಂಭ್ರಮ ನಿಜ ಅರ್ಥ ಪಡೆಯುತ್ತದೆ. ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ ಆಚರಣೆಗಳು ಮಾತ್ರ ವಿಜೃಂಭಿಸಿ ಮುಖವಾಡಗಳು ಮೆರೆಯುತ್ತವೆ. ಸಾಮಾನ್ಯ ಜನ ನಿರಂತರ ಕಷ್ಟದಲ್ಲಿಯೇ ಇರುತ್ತಾರೆ.
ಇನ್ನಾದರೂ ನೈಜ ದೇಶ ಪ್ರೇಮ ನಮ್ಮ ಹೃದಯಗಳಲ್ಲಿ ಅರಳಲಿ.‌ ಸ್ವಾತಂತ್ರ್ಯದ ತ್ಯಾಗ ಬಲಿದಾನಗಳು ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಸದಾ ನೆನಪಾಗಲಿ. ನಮ್ಮ ನಡತೆಯ ಗುಣಮಟ್ಟ ಹೆಚ್ಚಾಗಲಿ……..

ಇದುವೇ ದೇಶಪ್ರೇಮ, ಇದುವೇ ದೇಶಭಕ್ತಿ.ನಾವು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಸಾರ್ಥಕತೆ.

ಜೈ ಭಾರತ 


ಸುಜಾತಾ ಪಾಟೀಲ ಸಂಖ

About The Author

1 thought on “ಸುಜಾತಾ ಪಾಟೀಲ ಸಂಖ ‘ದೇಶಪ್ರೇಮ ಹೃದಯಗಳಲ್ಲಿ ಅರಳಲಿ’”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಒಳ್ಳೆಯ ವಿಚಾರವನ್ನು ಪ್ರಸ್ತುತಪಡಿಸಿದ್ದೀರಿ ಮೇಡಂ ತಮಗೆ ಧನ್ಯವಾದಗಳು

Leave a Reply

You cannot copy content of this page

Scroll to Top