ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಬದುಕೇ ಕಠಿಣ ಶಿಕ್ಷೆಯಂತಾಗಿದೆ ಎನಗೆ ಹೇ ವಿಧಿಯೇ
ಮುಂದೆ ಇನ್ನೇನು ಕಾದಿದೆಯೋ ಕೊನೆಗೆ ಹೇ ವಿಧಿಯೇ

ಅಗಣಿತ ಚೂರಾಗಿ ಛಿಧ್ರಗೊಂಡಿದೆ ಎನ್ನ ಜೀವನ ಕನ್ನಡಿ
ಕೈಲಿ ಉಳಿದಿಹ ತುಣುಕೇ ಸೌಭಾಗ್ಯ ನನಗೆ ಹೇ ವಿಧಿಯೇ

ಸಾಮ್ರಾಜ್ಯಗಳು ಅಳಿದು ಹೋದವು ಹೆಣ್ಣ ಕಾರಣವಾಗಿ
ನೀಲಾಂ ನೋಟೀಸು ಹಚ್ಚಾಯಿತು ಮನೆಗೆ ಹೇ ವಿಧಿಯೇ

ಈ ಮಟ್ಟಕೆ ಸೆಳೆದೊಯ್ವುದೆಂದು ತಿಳಿಯದೆ ಹೋದೆ ಅಂದು
ಮೋದಲ ಬಾರಿಯ ಅವಳಲಿ ಕಂಡ ಕಿರುನಗೆ ಹೇ ವಿಧಿಯೇ

ಕಟ್ಟಿಕೊಂಡವಳೆ ಕೊನೆಗೂ ಇರಿಸಿದವಳು ಇದ್ದವರೆಗೆ ಮಾತ್ರ
ಕೃಷ್ಣಾ! ಕೈ ತುತ್ತಿನಷ್ಟು ಕವಳ ಸಾಕಾದೀತೆ ಆನೆಗೆ ಹೇ ವಿಧಿಯೇ. (ನೀಲಾಂ : ಹರಾಜು)


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top