ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಉರಿಯುತ್ತಿದೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸತ್ಯ ಸಮತೆ ಶಾಂತಿ ಪ್ರೀತಿ
ಹೊತ್ತಿ ಉರಿಯುತಿದೆ ಮಣಿಪುರ
ದ್ವೇಷ ಮತ್ಸರ ಸರಣಿ ಕೊಲೆ
ಹಾಳಾಯಿತು ಶಿವಪುರ

ಎಷ್ಟೋ ಮನೆ ಸುಟ್ಟು ಕರಕಲು
ರಕ್ತ ಹರಿಯಿತು ಬೀದಿ ಬೀದಿ
ಸತ್ತ ಜನರಿಗೆ ಲೆಕ್ಕವಿಲ್ಲ
ರಾಷ್ಟ್ರ ನಾಯಕ ಮೌನ ಮುರಿಯಲಿಲ್ಲ

ಮುದುಕ ಯುವಕ ಮಕ್ಕಳೆಲ್ಲರೂ
ನೆಲದ ಕೆಳಗೆ ಮಲಗಿಬಿಟ್ಟರು
ಕ್ರೂರ ಮುಖದ ರಕ್ಕಸರ
ಮಾಂಸದ ಹಸಿವು ಹಿಂಗಲಿಲ್ಲಾ

ಭಯ ಭೀತಿ ಬಿಕ್ಕಿ ಬಳಲಿ
ಹಸಿದ ಹೊಟ್ಟೆ ಸಾವು ನೋವು
ಆಟವಾಡುವ ಮುದ್ದು ಕಂದ
ಯಾವ ಪಾಪ ಮಾಡಲಿಲ್ಲ

ಹಿಂಸೆ ನಡೆದಿದೆ ಸುಲಿಗೆ ನಿತ್ಯ
ನಿಲ್ಲಲೊಲ್ಲದು ಜನರ ಹತ್ಯೆ
ವರದಿ ಮಾಡದ ಮಾಧ್ಯಮ
ಸಿಗದು ಇಲ್ಲಿ ಯಾವ ಭತ್ಯೆ

ಕಳೆದು ಹೋದವು ಏಳು ದಶಕ
ಬಾಪು ಬೋಸ್ ಕೊಟ್ಟ ಸ್ವಾತಂತ್ರ
ದುಷ್ಟ ಜನರ ನಂಬಿ ನಮ್ಮ
ಬಾಳ ಬಟ್ಟೆ ಅತಂತ್ರ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಉರಿಯುತ್ತಿದೆ”

  1. ಅನ್ನಪೂರ್ಣ ಸಕ್ರೋಜೀ

    ವಾಸ್ತವ ಸ್ಥಿತಿ ಎದ್ದು ಕಣ್ಣು ಮುಂದೆ ಕಟ್ಟಿದ ಹಾಗಿದೆ

  2. ಮಂಜುನಾಥ ನಾಶಿಪುಡಿ

    ಮಣಿಪುರ ಹೊತ್ತಿ ಉರಿಯುತ್ತಿರುವ ಘಟನೆ ಕಣ್ಣ ಮುಂದೆ ಕಟ್ಟಿಟ್ಟ ಅಪರೂಪದ ನೋವಿನ ಕವನ

Leave a Reply

You cannot copy content of this page

Scroll to Top