ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ನೀನಾದೆ

ಒಂಟಿಯಾಗಿ ನಡೆಯುತ್ತಿದ್ದೆ
ಗುಡುಗು ಸಿಡಿಲು ಮಿಂಚು
ರಭಸ ಮಳೆ ದಟ್ಟ ಕಾಡು
ನೀನಾದೆ ಎನಗೆ ಕೊಡೆ

ಬೆಟ್ಟ ಗಿರಿ ಪರ್ವತ
ಹತ್ತಿ ಹೋಗಬೇಕು ಮೇಲೆ
ಕಲ್ಲು ಮುಳ್ಳು ಹೊದಿಕೆ
ನೀನಾದೆ ಊರುಗೋಲು

ಮುಂದೆ ದೊಡ್ಡ ಸಾಗರ
ರುದ್ರ ಅಲೆ ಚಂಡ ಮಾರುತ
ಜಲಚರ ಮೀನು ತಿಮಿಂಗಲು
ನೀನಾದೆ ಹರಿಗೋಲು

ಹಲವು ಕನಸು ಬಯಕೆ
ಚಿಗುರೊಡೆದವು ನೆಲದಲ್ಲಿ
ಬಿಸಿಲು ಬೇಗೆ ಬರದ ಬೇನೆ
ನೀನಾದೆ ಹೆಮ್ಮರ

ಹಸಿದ ಒಡಲು
ಪ್ರೀತಿ ಕಡಲು
ಬಾಳ ಬದುಕಿಗೆ
ನೀನಾದೆ ಜೀವ ಜಲ


About The Author

1 thought on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ- ನೀನಾದೆ”

Leave a Reply

You cannot copy content of this page

Scroll to Top