ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಣ್ಣೀರೆಂಬ ಜೀವಜಲ

ಟಿ.ದಾದಾಪೀರ್, ತರೀಕೆರೆ

ಸಾಗರದಂತಹ
ಕಣ್ಣುಗಳಲ್ಲಿ ಬರಿ ನೀರಿದೆ
ಅಂದು ಕೊಂಡಿದ್ದೆ

ಹನಿ ಹೊಡೆದು
ಹೊರ ಬಂದಾಗ
ಫಳ ಫಳನೆ ಮಿಂಚಿದ್ದು
ಮಾತ್ರ
ಬೆಲೆ ಕಟ್ಟಲಾಗದ
‘ಮುತ್ತು,ರತ್ನ,ಹವಳಗಳೇ’

ನೀನಳುವೆ ಎಂಬುದು
ಮೊದಲೆ ಗೊತ್ತಿದ್ದರೆ
ಬೊಗಸೆಯಲ್ಲಿ
ಹಿಡಿದಿಟ್ಟು ಕೊಳ್ಳುತ್ತಿದ್ದೆ
ಕಣ್ಣೀರ ಹನಿಗಳ…
ಬೇಕಾಗುತ್ತಿತ್ತು
ದೇಶ, ಭಾಷೆ, ಗಡಿಯ
ಬೆಂಕಿಯ ನಂದಿಸಲು
ನಾಳೆಗಳ ನೆಮ್ಮದಿಗಾಗಿ

ನೀನು
ತುಟಿ ಕಚ್ಚಿ ಹಿಡಿದಿಟ್ಟರು
ಹಿಡಿದಿಡಲಾಗದ
ಕಣ್ಣೀರ ಹನಿಗಳೆಲ್ಲ .
ಸದ್ದು ಮಾಡುತ್ತಿವೆ ನನ್ನೆದೆಯಲ್ಲಿ

ಸಿಡಿಲಬ್ಬರದ ಮುಂಗಾರು
ನೀರಸ ಅನಿಸುತಿದೆ
ಹೇಳದೆ ತೊಟ್ಟಿಕ್ಕಿದ
ನಿನ್ನ ಕಣ್ಣಿರ ನಾಲ್ಕು ಹನಿಗಳ
ಜೀವಜಲದ ಮುಂದೆ


About The Author

2 thoughts on “ಟಿ.ದಾದಾಪೀರ್, ತರೀಕೆರೆ ಕವಿತೆ-ಕಣ್ಣೀರೆಂಬ ಜೀವಜಲ”

Leave a Reply

You cannot copy content of this page

Scroll to Top