ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮಹಾದೇವಪ್ಪ

ಬರಗಾಲದ ಬವಣೆ

ಬರಗಾಲ ಬವಣೆಗೆ
ಭಾವನೆಗಳೇ ಸುಟ್ಟು ಕರಕಲಾಗಿ
ಬಾಂಧವ್ಯ ಮರೆತು
ಬೇಯುತ್ತಿದೆ ಜೀವ

ಮೋಡ ಬಿತ್ತನೆಗೆ
ಹೋಮ ಹವನಕ್ಕೆ
ಜಪ ತಪಗಳಿಗೆ
ಒಲಿಯದ ವರುಣದೇವ

ಪ್ರಾರ್ಥಿಸುವೆನು ನಿನಗೆ
ಒಡಲೊಳಗೆ ತುಂಬಿ ತುಳುಕುವ
ಮತ್ಸರದ ಗೋಡೆಯನು
ಒಡೆದು ಬಾ ಭೂವಿಗೆ

ಮಾತಿನ ಅಹಮಿಕೆಯಲಿ
ಮೌನವಾಗಿ ಮಾನವತೆಯನು
ಮರೆತ ಮನುಷರಿವರು
ಇಳಿದು ಭಾ ಧರೆಗೆ

ಇಳೆಯ ದಾಹ ನೀಗಿಸಿ
ಇರುಳಿನಲಿ ನರಳಾಡುವ
ಜೀವ ಸಂಕುಲಕೆ
ಬೆಳಕಾಗಿ ಬಾ

ಗುರಿಯಿರದ ಬಾಳಿಗೆ
ಗುರುವಾಗಿ
ಜಂಗಮವಾಣಿಯ
ಗುಂಗಿನಲಿ ವೇಷಮರೆತು

ಕಾನನದೊಳು ಸಿಲುಕಿದವರಿಗೆ
ಬಟ್ಟೆದೋರಲು ಬಾ ಭುವಿಗೆ
ಅರಿಯದ ಕಂದಮ್ಮಗಳು
ಕಾಮತೃಷೆಗೆ ಬಲಿಯಾಗಿ

ವ್ಯಸನಕ್ಕೆ ದಾಸರಾಗಿ
ಮಾತಾ ಪಿತೃಗಳನು ಕಡೆಗಣಿಸಿ
ದಿಕ್ಕು ತೋಚದೆ
ರೆಕ್ಕೆ ಮುರಿದು ಬಿದ್ದಿರುವ ಹಕ್ಕಿಗೆ
ಗೂಡು ಸೇರಿಸಲು ಬಾ ಭುವಿಗೆ

ಜಾಗತೀಕರಣ ಯಾಂತ್ರಿಕರಣದ
ಸೋಗಿನಲಿ ಬರಡು ಬರಡಾದ
ಕಾನನ ಬೆಂಕಿಗೆ ಆಹುತಿಯಾಗಿ
ವನ್ಯ ಜೀವಿಗಳ ನೆಲ ಕಿತ್ತುಕೊಂಡ
ಧನದಾಹಿಗಳ ದಾಹ ತೀರಿಸಲು
ಬಾ ಭುವಿಗೆ

ಬೋರ್ಗರೆದು ಬಾ
ಭೂಮಿ ಆಕಾಶ ಒಂದಾಗಿ
ಸುರಿಯುವ ಮಳೆಗೆ
ಜನರ ಎದೆ ನಡುಗಿ
ಜಗವೆಲ್ಲ ಒಂದಾಗಿ
ಐಕ್ಯತೆಯ ಗೂಡು ಸೇರಲು
ಬಾ ಭುವಿಗೆ ಬೋರ್ಗರೆದು ….


About The Author

Leave a Reply

You cannot copy content of this page

Scroll to Top