ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಹನಿಗಳು

  1. ಏಳು..!

ಕಾಮನಬಿಲ್ಲ ಬಣ್ಣಗಳೆಸಿದ್ದು
ಸಾಕು ಮೇಲೇಳು ಗೆಳೆಯ
ಬದುಕೀಗ ಬಣ್ಣಬಳಿವ ಸಮಯ.!

  1. ಮೌಲ್ಯ..!

ಕಂಬನಿಯಿಂದ ಬೆಳೆದ
ಇಳುವರಿಗಿಂತಲೂ
ಬೆವರಿನಿಂದ ಬೆಳೆದ
ಇಳುವರಿಯೇ ಅಧಿಕ.!
ಅನುಕಂಪದ ಫಸಲಿಗಿಂತ
ಪರಿಶ್ರಮದ ಫಸಲಿಗೆ
ಮೌಲ್ಯ ಅತ್ಯಧಿಕ.!

  1. ಮನವಿ.!

ಸೃಷ್ಟಿಸಬೇಡಿ ಕಣ್ಣೆದುರಿಗೆ
ಕನಸುಗಳ ಭ್ರಮಾಲೋಕ
ಕೊಟ್ಟುಬಿಡಿ ಖಾಲಿಕೈಗಳಿಗೆ
ದುಡಿಯಲಿಷ್ಟು ಕಾಯಕ.!

ಕೂಳು ನೀಡಿ ಸಲಹುವ
ವೈಶಾಲ್ಯತೆಗಿಂತಲೂ
ಕೂಳು ಗಿಟ್ಟಿಸುವಂತಹ
ಕೆಲಸ ನೀಡಿ ಪೊರೆವ
ವಿವೇಕ ಅಭಿನಂದನೀಯ.!
ಹಸಿವಿಂಗಿಸುವನಿಗಿಂತ
ಹೊಟ್ಟೆ ಹೊರೆವ ದಾರಿ
ತೋರಿಸುವವ ಪೂಜ್ಯನೀಯ.!

  1. ಅಕ್ಷಮ್ಯ.!

ನಿಮ್ಮ ಸ್ವಾರ್ಥ ಗುರಿ ಸಾಧನೆಗಳಿಗೆ
ಜನರ ಭಾವಗಳೊಂದಿಗೆ ಆಡಿದರೆ
ಕಾಲ ಕ್ಷಮಿಸೀತೇನೋ ಕೆಲಕಾಲ..
ಭವಿಷ್ಯಗಳೊಂದಿಗೆ ಚೆಲ್ಲಾಟವಾಡಿ
ಬದುಕು ಭರವಸೆಗಳ ದಿಕ್ತಪ್ಪಿಸಿದರೆ
ಕಾಲ ಕ್ಷಮಿಸದು ನಿಮ್ಮನನುಗಾಲ.!

  1. ವೇದ್ಯ..!

ದುಡಿವವನ ತಟ್ಟೆಯಿಂದೆತ್ತಿ
ಮಲಗಿದ್ದವನ ಬಾಯಿಗಿಟ್ಟರೆ
ಸಂಘರ್ಷಕ್ಕೆ ಬುನಾದಿ.!
ಮಲಗಿದ್ದವನ ಮೇಲೆಬ್ಬಿಸಿ
ದುಡಿಯಲು ಹಚ್ಚಿದರಷ್ಟೇ
ಸಮಾನತೆಗೆ ನಾಂದಿ..!!


ಎ.ಎನ್.ರಮೇಶ್. ಗುಬ್ಬಿ.

About The Author

Leave a Reply

You cannot copy content of this page

Scroll to Top