ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಯಚಂದ್ರನ್ ಕವಿತೆಗಳು

ಬದುಕಿನೊಳಗಣ ಮೌನ

ಬದುಕು ನನಗೆ ಕೊಟ್ಟಿದ್ದು ಮೌನ
ಯಾತನೆಯ
ಶೂನ್ಯ

ಧ್ವನಿಯಿಂದ ವಂಚಿತನಾದ
ನನಗೆ
ಇರುವುದೊಂದೇ ದಿಕ್ಕು
ತಿಳಿಯದ
ಸುತ್ತು ಹಾಕಿದ,
ನಾನೇ ಕಟ್ಟಿಕೊಂಡ ಬಂಧನದ ಕಾಡು
ಕಾಡುವ ಮೌನ

ಕಳೆದ ಕ್ಷಣಗಳೊಳಗಣ ದರಿದ್ರ ಮೌನವನ್ನು,
ಈ ಸ್ತಬ್ಧ ಶಬ್ದಗಳಲ್ಲಿರಿಸಿ ಅನಿವಾರ್ಯ ದುರಂತಕ್ಕಿಳಿಸಿದ್ದೆನೆ.
ಕ್ಷಮಿಸು,
ಬೇರೆ ದಾರಿಯಿಲ್ಲ.ಯಾಕೆಂದರೆ
ಬದುಕು ದುರ್ಬರವಾಗಿದೆಯಲ್ಲ ?
…….

ಹರವು

ಜೀವ ಸ್ಪರ್ಶದ ಬೆಳಕಿನಲಿ
ಬೆಳಗಿಹುದು ಅರಿವು .
ಹುಟ್ಟು ಸಾವುಗಳ ನಡುವೆ
ಹುದುಗಿಹುದು
ಅರಿವಿನಾ ಹರವು
……..

ಆಂತರ್ಯ

     ಕಾಲಗರ್ಭದಲಿ 
     ಅಂತರ್ ಪಿಶಾಚಿ 
      ನಾನಾದೆ. 
      ರಹಸ್ಯ ತಿಳಿಯಲೆಂದು 
      ಹೊರಟ ನನಗೆ
      ತಿಳಿಯಲಿಲ್ಲ--
      ಪರಮಾರ್ಥದ ಬೇಲಿ. 
-------------------------------------------

About The Author

3 thoughts on “ಜಯಚಂದ್ರನ್ ಕವಿತೆಗಳು”

Leave a Reply

You cannot copy content of this page

Scroll to Top