ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಹಾದೇವಿ ಪಾಟೀಲ..

ಬುದ್ಧನಲ್ಲ ಪ್ರಬುದ್ಧ ನೀ ಗುರುವೇ

ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಮಾನವತ್ವ ಸಾರಿದ ಸಮಷ್ಟಿಯ ಚೇತನ ನೀ ಮನೋವಿಕಾರ ಕಳೆದ ಶಾಂತಿಯ ದ್ಯೋತಕ ನೀ
ಪ್ರೀತಿಯ ಪರಿಭಾಷೆ ತಿಳಿಸಿದ ಪ್ರೇಮಮಯಿ ನೀ||

ಬರಿ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಪಶು ಪ್ರೇತಗಳಿಗೂ ದೈವತ್ವ ಕರುಣಿಸಿದವ ನೀ ಸರ್ವ ಚಿತ್ತ ವೃತ್ತಿಗಳ ಅಸ್ತಿತ್ವವೇ ದೇವರೆಂದವ ನೀ
ಭ್ರಾಮಿಕ ದೈವದ ಕಲ್ಪನೆಯ ಅಲ್ಲಗಳೆದವ ನೀ||

ಬರಿ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ವಿದೇಹದ ಮುಕ್ತಿಯೇ ಮನದ ಮುಕ್ತಿ ಎಂದವ ನೀ
ಜೀವಿ ಸಂಕುಲದ ಪ್ರತೀಕಣದಲ್ಲೂ ಜ್ಞಾನ ಕಂಡವ ನೀ
ಅಂತರ್ಗತ ಜ್ಞಾನವೇ ಮುಕ್ತಿ ಮಾರ್ಗ ಎಂದವ ನೀ||

ಬರಿ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಧರ್ಮಕ್ಕೆ ಶರಣಾದವರನ್ನು ಕಾಪಾಡಿದವ ನೀ ಜ್ಞಾನಕ್ಕೆ ಶರಣಾದವರಿಗೆ ಬೆಳಕಾದ ರವಿತೇಜ ನೀ ಅಹಿಂಸೋ ಪರಮೋಧರ್ಮ ಎಂದರುಹಿದ ತಥಾಗತ ನೀ||

ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಸಾಯಲು ಹೇಗೆ ಸಿದ್ಧವಾಗಿರಬೇಕೆಂದು ಕಲಿಸಿದ ನಿರ್ವಿಕಲ್ಪ ನೀ
ಸಂತೋತ್ಸಾಹದಿ ಬಾಳುವ ಮಾರ್ಗ ತೋರಿದ ಮಹಾತ್ಮ ನೀ
ಸಂಭಾವಿತರಂತೆ ಸೋಗು ಹಾಕುವವರ ಹುಟ್ಟಡಗಿಸಿದ ಸತ್ಯಮುನಿ ನೀ ||

ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ
ಭುವನದಲ್ಲಿ ಎಲ್ಲ ಇದ್ದೂ ಇಲ್ಲದಂತೆ ಬದುಕಿದವ ನೀ
ಸರ್ವಸಂಗಪರಿತ್ಯಾಗಿಯಾಗಿ ಸತ್ಯದರ್ಶನ ಮಾಡಿಸಿದ ಸಿದ್ಧಪುರುಷ ನೀ
ಸರ್ವ ದುಃಖ ನಾಶಕೆ ಅಷ್ಟಾಂಗ ಮಾರ್ಗ ಬೋಧಿಸಿ ಮಹಾಪರಿನಿರ್ವಾಣವಾದವ ನೀ||


ಮಹಾದೇವಿ ಪಾಟೀಲ..

About The Author

Leave a Reply

You cannot copy content of this page

Scroll to Top