ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ

ಹೆಚ್. ಎಸ್. ಪ್ರತಿಮಾ ಹಾಸನ್.

ಬೇಸಿಗೆ ಶಿಬಿರಗಳು

ಮಕ್ಕಳ ಆತ್ಮಸ್ಥೈರ್ಯವನ್ನು

ಹೆಚ್ಚಿಸುವಂತಿರಬೇಕು

ಹಾಸನ ಜಿಲ್ಲಾ ಶಾತ್ತಾದ.ಶ್ರೀ ವೈಷ್ಣವ ಸಂಘ (ರಿ). ಹಾಸನ. ಇವರ ವತಿಯಿಂದ ಪಿ ಡಬ್ಲ್ಯೂ ಕಾಲೋನಿ ರಾಮಮಂದಿರದಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಬೇಸಿಗೆ ಶಿಬಿರಗಳು ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಿರಬೇಕು. ಎಂಬ ನಿಲುವಿನಲ್ಲಿ ಐದು ವರ್ಷದಿಂದ 16 ವರ್ಷದ ವಯೋಮಿತಿಯ ಮಕ್ಕಳಿಗೆ ಕರಾಟೆ, ನೃತ್ಯ, ಗಾಯನ, ಯೋಗ, ಹೀಗೆ ಹಲವಾರು ತರಬೇತಿಗಳನ್ನು ಐದು ದಿನದ ಶಿಬಿರದಲ್ಲಿ ಕಲಿಸಲಾಯಿತು. ಶಿಬಿರದ ಕೊನೆಯ ದಿನದಂದು. ಮಕ್ಕಳಿಗೆಲ್ಲ ಮಾತೃ ಪೂಜನ, ಮಾತೃ ಭೋಜನ, ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮದಲ್ಲಿ ಹಲವಾರು ಅತಿಥಿಗಳಿಗೆ ಸನ್ಮಾನ ಮಾಡುವುದರ ಮುಖಾಂತರ ಧನ್ಯವಾದಗಳು ತಿಳಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆಲ್ಲ ಪ್ರಮಾಣ ಪತ್ರ ಮತ್ತು ಕಿರು ಕಾಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಹರೀಶ್, ನವೀನ್, ರಾಘವೇಂದ್ರ, ದೇವರಾಜ್, ದರ್ಶನ್, ಕಲಾವತಿ, ರಾಣಿ, ಶ್ರೀಧರ್, ಕಾಂಚನ, ಹೆಚ್. ಎಸ್. ಪ್ರತಿಮಾ ಹಾಸನ್. ಮತ್ತು ಗಿರೀಶ್. ಶಿಲ್ಪ ಮತ್ತು ಹಲವಾರು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Leave a Reply

You cannot copy content of this page

Scroll to Top