ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಸತ್ಯ ಶೋಧಕ ಬೋಧಕ ಬುದ್ಧ

ಏಕಾಂತದಲಿ ಕುಳಿತ ಪ್ರಶಾಂತ ವದನ
ದೇಹ ಮತ್ತು ಮನಸ್ಸಿನ ನಿಯಂತ್ರಣ
ಜ್ಞಾನ ಸುಧೆಗೆ ಬುದ್ಧ ಸಮರ್ಪಣ
ಸತ್ಯ ಶೋಧನೆಗೆ ಪ್ರಪಂಚ ಪರ್ಯಟನ
ಬುದ್ಧ ತೋರಿದನೆಲ್ಲೆಡೆ ಆದರ್ಶ ಜೀವನ

ಸತ್ಯ ಅಹಿಂಸೆ ಆಸ್ತೆಯ ಬ್ರಹ್ಮಚರ್ಯ
ಬೌದ್ಧ ಧರ್ಮಕೆ ಅದುವೇ ಧರೋಹರ
ಬುದ್ಧನ ತತ್ವ ಸಿದ್ಧಾಂತಗಳ ಮೌಲ್ಯದ ಆಸರ
ಸ್ವಚ್ಛಂದದ ಜೀವನಕ್ಕೆ ಅದುವೇ ಆಧಾರ
ಆತ ಸಮಾಜ ಪರಿವರ್ತನೆಯ ಹರಿಕಾರ

ಸರ್ವಸಂಗ ಪರಿತ್ಯಾಗದಿ ಬುದ್ಧನಾಗಲಿಲ್ಲ
ಬದುಕಿನ ಸತ್ಯದರ್ಶನದಿ ಬುದ್ಧನಾದನಲ್ಲ
ನಿನ್ನ ನೀ ಗೆಲ್ಲದಿದ್ದರೆ ಪ್ರಯೋಜನವೆನಿಲ್ಲ
ಬುದ್ಧ ಎಲ್ಲಿಯೂ ಏನು ಬರೆದಿಡಲಿಲ್ಲ
ಆತನ ಬೋಧನೆಗಳನ್ನ ಜನ ಮರೆಯಲಿಲ್ಲ

ಜನನ ಜ್ಞಾನೋದಯ ಮೋಕ್ಷದ ಸಂಗಮ
ಬೌದ್ಧ ಪೌರ್ಣಮೆಯಲ್ಲಿ ಬುದ್ಧನ ಸಮಾಗಮ
ಬುದ್ಧನ ಅಷ್ಟಾಂಗಮಾರ್ಗವೇ ಜೀವನದ ಮರ್ಮ
ನಿರ್ವಾಣದ ಸಾಕ್ಷಾತ್ಕಾರದಲ್ಲಿ ಆತ್ಮಾನಂದಾಗಮ
ಆಧ್ಯಾತ್ಮದ ಹಾದಿಯಲ್ಲಿ ಸದ್ಗುಣಗಳ ಪರಂಧಾಮ

ಪ್ರಕೃತಿಯಲ್ಲಿ ಮಿಂದು ಸ್ವಿಕೃತಿಯಲ್ಲಿ ಜ್ಞಾನ ಪಡೆದ
ಸಕಲ ಸಿದ್ಧಿಯಲಿ ಜಗದ ಕೊಳೆಯ ತೊಳೆದ
ಮೋಹಮಾಯೆಯ ಜಾಡು ಅಳಿಸಿದ
ಪವಿತ್ರ ವಿಚಾರದ ದಾರ್ಶನಿಕನಾಗಿ ಹೊಳೆದ
ವಿಶ್ವದೆಲ್ಲೆಡೆ ಬೌದ್ಧ ಧರ್ಮದ ಬೆಳಕು ಚೆಲ್ಲಿದ


  ಶ್ರೀಮತಿ ಸುಲೋಚನಾ ಮಾಲಿಪಾಟೀಲ

 

About The Author

Leave a Reply

You cannot copy content of this page

Scroll to Top