ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಾಂತಾ ಕುಂಟಿನಿ

ಹೀಗಿರೋಣ

ಹೊಟ್ಟಾದ ಬೀಜವು ನೀರಿನಲ್ಲಿ
ಒಮ್ಮೆಲೆ ಮೇಲಕ್ಕೆ ಏರಿತು
ಬಹು ಬೇಗನೆ.
ಆದರೆ ಬಾಳ್ವಿಕೆ ಇರಲಿಲ್ಲ.

ಇದೇ ಸತ್ಯ ಅಂದುಕೊಂಡು ಜನ
ಸ್ವಲ್ಪ ದಿನ ನೋಡಿದರು…
ನಂಬಿದರು..

ನಿಧಾನಕ್ಕೆ ಮರೆತೇ ಬಿಟ್ಟರು..
ತಳದಲ್ಲಿ ಬೇರೂರಿದ ಬೀಜ ನಿಧಾನಕ್ಕೆ
ಭದ್ರವಾಗಿ ಭೂಮಿಯ ಹಿಡಿದು ಕೊಂಡಿತು…
ಚಿಗುರಿತು…

ಚಿಗುರೊಡೆದು ಸಸಿಯಾಯಿತು
ನಂತರ ಮರವಾಗಿ
ತಾನೂ ನಿಂತು ಉಳಿದವರ ನಿಲ್ಲಿಸಿ
ಸಮಾಜಕ್ಕೆ ಉಪಕಾರಿಯಾಗಿ
ಬದುಕಿ ತೋರಿಸಿತು…


About The Author

Leave a Reply

You cannot copy content of this page

Scroll to Top