ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ಹನಿಗವನಗಳು

ಕುರುಡು ಕಾಂಚಾಣ

ಅರಳುವ ಮುನ್ನವೇ ಬಾಡಿದ ಹೂವು
ಮನದಲ್ಲೇ ಉಳಿದಿತ್ತು ನೂರಾರು ನೋವು
ನೈತಿಕತೆಯ ಮರೆತ ದುರುಳನ ನರ್ತನ
ಎಳೆಜೀವ ಸೇರಿತು ಮರಳದೆ ಮಸಣ
ಬಡವಿಯ ಮನೆಯಲಿ ನೀರವ ಮೌನ
ಕಾಮುಕನ ಉಳಿಸಿತು ಕುರುಡು ಕಾಂಚಾಣ

ಪಾವನ

ಎತ್ತ ನೋಡಿದರೂ ಕತ್ತಲು
ಕಣ್ಣು ಕಾಣದೆ ಬಾಳು ಇರುಳು
ಅನುದಿನವೂ ನಿನ್ನದೇ ನಿರೀಕ್ಷೆ
ಸಾಕು ನಿಲಿಸು ಈ ಅಗ್ನಿಪರೀಕ್ಷೆ
ಬಾಚಿ ತಬ್ಬಿಕೋ ನನ್ನ ನಯನ
ಜೀವನವಾಗಲಿ ನಿನ್ನಿಂದ ಪಾವನ


ಪರಿಮಳ ಐವರ್ನಾಡು ಸುಳ್ಯ

About The Author

Leave a Reply

You cannot copy content of this page

Scroll to Top