ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಶ್ಚಿತ.ಎಸ್.

ಯಾಕೀತರ

ಬಾಳು ಬಂಡಿ ಅಂತೆ ಸಾಗುತ್ತಿದೆಯಾದರೂ…….
ಆದರೆ ನನ್ನ ಆಸೆಯ ದಾರಿ ಯಾಕೋ ಸವೆಯುತ್ತಿಲ್ಲ…..
ಯಾಕೀತರ???

ಕವಿಯುತಿದೆ ಮನಸ್ಸಿಗೆ ಕತ್ತಲು ಕಾರ್ಮೋಡದ ತರ …..
ಅರಳುತ್ತಿಲ್ಲ ಹೂವಿನ ತರ….
ಯಾಕೀತರ??

ಹೃದಯದೊಳಗೆ ಕುದಿಯುತ್ತಿದ್ದರೂ ಸಾವಿರ ನೋವು…
ಸದಾ ಮಂದಹಾಸ ಮೂಡಿರುತ್ತದೆ ಮುಖದೊಳಗೆ….
ಯಾಕೀತರ??

ಮಳೆ ಸುರಿಸಿ ಮೋಡ ಹಗುರಾಗುತ್ತದೆನೋ…..
ನಾ ಕಣ್ಣೀರು ಸುರಿಸಿದರೂ ಹಗುರವಾಗುತ್ತಿಲ್ಲ ನನ್ನ ಮನಸ್ಸು…..
ಯಾಕೀತರ??

ನೀಡದಿದ್ದರೂ ಬೆಲ್ಲವನ್ನು.. ನೀಡದಿರು ಬೇವನು….
ಇದ್ದರು ಸಾವಿರ ನೋವು ನನ್ನೊಳಗೆ ಹಂಚುವೇ ನಾ ನಗುವನೆಲ್ಲರಿಗೂ…
ಯಾಕೀತರ????


About The Author

Leave a Reply

You cannot copy content of this page

Scroll to Top