ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಬಳಲುತ್ತಿದೆ ಭೂಮಿ

ಬರಡಾದ ಭೂಮಿ ಮೇಲೆ
ಬೋರಲಾಗಿ ಬಿದ್ದು ಬಿಕ್ಕಿಬಿಕ್ಕಿ
ಅಳುತಿಹನು ಭೂಮಿಪುತ್ರ
ಶಪಿಸುತಿಹನು ಮಾರ್ತಂಡನ

ನರಳುತಿಹಳಿಂದು ಭೂತಾಯಿ
ಹನಿ ನೀರಿಗೆ ಬಾಯಿಬಿಡುತಿಹಳು
ಮಕ್ಕಳ ಹುಚ್ಚಾಟಕೆ ನಡುಗತಿಹಳು
ಆರ್ತತೆಯಿಂದ ಕರೆಯುತಿಹಳು

ಕಲುಷಿತ ವಾಯು ಅಣ್ವಸ್ತೃಗಳ
ಪ್ರಯೋಗದಿ ಉಸಿರು ಕಟ್ಟಿದೆ
ಎದೆಹಾಲುಬತ್ತಿದಬಾಣಂತಿಯಂತೆ
ಹತಾಶಳಾಗಿ ಕಣ್ಣೀರಿಡುತ್ತಿದ್ದಾಳೆ

ಕರುಳು ಕರಗುವಂತೆ ಕರೆಯುತ
ಜೀವಜಲಕಾಗಿ ಗಂಗೆ ತುಂಗೆಯರ
ಕೊರಕಲು ಮೈಯ ಮುಚ್ಚಿರೆಂದು
ಕೈಮುಗಿದು ಕೇಳುತಿಹಳಿಂದು

ಕ್ಷಮಯಾ ಧರಿತ್ರಿ ಕ್ಷಮಿಸಲಾರಳು
ನಮ್ಮನು ನಮ್ಮ ಸ್ವಾರ್ಥಗಳನು
ಮರ ಗಿಡಗಳ ಸೊಂಪಿನ ತಂಪು
ನೀಡಿರೆಂದು ಬೇಡುತಿಹಳು

ಬಳಲುತಿದೆ ಭೂಮಿಜ್ವಾಲಾಮುಖಿ
ಭೂಕಂಪ ಪ್ರವಾಹ ತ್ಸುನಾಮಿ
ವಿಷಮಯ ವಾಯು ಎಲ್ಲ ಸಹಿಸಿ
ರಕ್ತದ ಕಣ್ಣೀರು ಹರಿಸುತಿಹಳು


About The Author

Leave a Reply

You cannot copy content of this page

Scroll to Top