ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಭಾರತಿ ಅಶೋಕ್

ಮನದಂಗಳ ಗುಡಿಸುವಾಗ..

)

ಮುಂಜಾವಿನಲಿ
ಅಂತರಂಗದ ಕದವ ತೆರೆಯಲು
ಮನದ ಮೈಗೆ ತಾಗಿದ ಬಿಸಿಗಾಳಿಯಲೇ
ನಿನ್ನುಸಿರ ಕಲರವ ಕಂಡು ಬಾಗಿಲ ಮುಚ್ಚಿದೆ
ತೂರಿ ಹೊಗದಂತೆ ಒಡಲ ತುಂಬಿಕೊಳಲು.

ಹೃದಯ ಗೂಡನು ಜಾಡಿಸಿ ಗುಡಿಸುವಾಗ
ಕಂಡ ಹೆಜ್ಜೆಯ ಗುರುತುಗಳು
ನಿನ್ನವೆಂದು ಅರಿತಾದ ಮೇಲೆ
ಗುಡಿಸದೇ ಶೃಂಗರಿಸಿ ಕಾಪಿಡುವೆ
ಅಳಿಸದಂತೆ.

ಇರುಳೆಲ್ಲಾ ನೀನಡೆದ ಎದೆ ಭೂಮಿಯಲಿ ನೆನಪುಗಳ ಮೆರೆವಣಿಗೆ ಅನುರಣನ
ಮೂಲೆ ಮೂಲೆಯಲು ಚೈತ್ಯನ್ಯದ ನರ್ತನ
ನರ್ತಿಸುತಿರಲಿ ಸದಾ ಸ್ಪೂರ್ತಿಯಾಗಿರುವೆ..


About The Author

Leave a Reply

You cannot copy content of this page

Scroll to Top