ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಲ್ಲಮ

ಹುಳಿಯಾರ್ ಷಬ್ಬೀರ್

ಅಲ್ಲಮನೊಬ್ಬನೇ
ಇರಬೇಕು
ನನ್ನ ಜಗದೊಳಗ
ಬೆಳಕಿನ ಜೊತೆಯಾಗಿ
ನಡೆದು ಬರುವ ನೆರಳಿನಂತೆ
ಬಸವ ಅಕ್ಕಾದಿ ಶರಣರು
ಪಂಪ ರನ್ನಾದಿಗಳು
ಮುಖಾ ಮುಖಿಯಾದರು
ನಾ ಅಲ್ಲಮನ ನಿಜ ಭಕ್ತ
ಬಾ ಹೊರಗ
ನಾ ಅಲ್ಲಮ
ಬಂದಿದ್ದೀನಿ..
ತಾತ್ವಿಕ ಭಿಕ್ಷೆ ಹಾಕು
ಜಡತ್ವ ಬಿಡು
ಚೈತನ್ಯದಾಯಕನಾಗು..
ಈ ಆಲಾಪನೆಯೇ
ನನ್ನನ್ನು ಜಂಗಮನಾಗಿ
ಅಹಂ ಬಿಡಿಸಿ
ಗೆದ್ದಲ ನೆಲ
ಹಾವು ಹೊಕ್ಕ ಮನೆಯ
ಮುಂಗುಸಿಯಾಗಿಸದೇ
ಬೌದ್ಧಿಕ ಅಲೆಮಾರಿಯಾಗಿಸಿದವ
ನನ್ನ ಅಲ್ಲಮ…!


About The Author

Leave a Reply

You cannot copy content of this page

Scroll to Top