ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಸಂತೆ ಮುಗಿಸಿದ ಸಂತ

    ಸಂತನಾಗಬೇಕು ಯೋಗಿಯಾಗಬೇಕೆಂದು ಬದುಕಿದವರಲ್ಲ
    ಮನುಷ್ಯನಾಗಬೇಕೆಂದು ತಿಳಿಯಹೇಳಿದವರನ್ನು ಸಂತನನ್ನಾಗಿಸೇ ಬಿಟ್ಟ ದೇವರು

    ನಿರಾಕಾರವೇ ದೈವ ಅನುಭವಿಸು ಅನುಭೂತಿಯ ಭಾವ ಮರೆಯದಿರು ಮನುಷ್ಯತ್ವವ ತೊರೆಯಲೇಬೇಕು ಈ ಭವ ಎನ್ನುತ್ತಲೇ ಸಂತೆ ಮುಗಿಸಿದ ಸಂತ

    ಭಾವನೆಗಳ ದಿಬ್ಬಣದಲಿ ಈ ಭವದ ಜಂಜಡದಲಿ
    ಪದಗಳನೇ ಪುಂಜವಾಗಿಸಿ ವೇದಗಳನೇ ಉಸಿರಾಗಿಸಿ
    ಜಾತಿ ವಿಜಾತಿಗಳ ದೂರೀಕರಿಸಿ
    ಸಕಲರೊಂದೆ ಎಂಬ ಭಾವ ಭೋದಸಿ ಸಂತೆಮುಗಿಸಿದ ಸಂತ

    ಸತ್ಯವೂ ಇಲ್ಲ ಅಸತ್ಯವೂ ಇಲ್ಲ ಸಹಜವೂಇಲ್ಲ ಅಸಹಜವೂ
    ಇಲ್ಲ ನಾನೂಇಲ್ಲ ನೀನೂಇಲ್ಲ ಇಲ್ಲ ಇಲ್ಲ ಎಂಬುದೇ ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು ಅಂತ್ಯಃ ಪ್ರಣಾಮಾಂಜಲಿ ಎನ್ನುತ್ತಲೇ ಜಗವನೇ ಅನಾಥವಾಗಿಸಿ ಸಂತೆಮುಗಿಸಿದ ಸಂತ

    ಪಾಮರರು ನಾವು ಅಶ್ರುಗಳನರ್ಪಿಸಬಲ್ಲೆವು ದುಖಃ ತಡೆಯದೇ ..ಮರಳಿಬನ್ನಿ ಮತ್ತೋಮ್ಮೆ ಭವಕೆ ಜಗದದಾರಿಗೆ ಬೆಳಕಾಗಲು ಶರಣು ಶರಣಾರ್ಥಿ..ಶರಣು ಶರಣಾರ್ಥಿ


    ಇಮಾಮ್ ಮದ್ಗಾರ

    About The Author

    Leave a Reply

    You cannot copy content of this page

    Scroll to Top