ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಮೊದಲೆ ಹೇಳಿಬಿಡಬೇಕಿತ್ತು ಇದೊಂದು ನಾಟಕವೆಂದು
ಹೃದಯ ತಿಳಿಯಬೇಕಿತ್ತು ಪ್ರೀತಿಯೊಂದು ಮೋಹವೆಂದು

ತುಟಿಗಳು ಕಂಪಿಸದೆ ದಿಗಿಲು ಬಡಿದು ಕುಳಿತಿವೆಯೇಕೆ
ನುಡಿಯ ಅರಿಯಬೇಕಿತ್ತು ಸದರವೊಂದು ಕಾರಣವೆಂದು

ಗೋಪುರ ಗಂಟೆಯಂತೆ ಘೋಷಧ್ವನಿ ಮೊಳಗಿತೇಕೆ
ಕಂಗಳು ನಂಬಬೇಕಿತ್ತು ಕಾಣವುದು ಮುಖವಾಡವೆಂದು

ವಿಶ್ವಾಸದ ನೆಪದಲ್ಲಿ ಕೃತಘ್ನತೆಯನ್ನು ಮೆರೆವೆಯಲ್ಲ
ಬಂಧವನು ತೊರೆಯಬೇಕಿತ್ತು ಸುಖವು ಇನ್ನಿಲ್ಲವೆಂದು

ಭಾವಗುಚ್ಚದಲಿ ಅಭಿನವನ ಕುಸುಮವಿದು ಬಾಡಲಿಲ್ಲ
ಮೌನವು ಬೆರೆಯಬೇಕಿತ್ತು ಜೀವವದು ತಾನಿಲ್ಲವೆಂದು


About The Author

Leave a Reply

You cannot copy content of this page

Scroll to Top