ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಒಡಲ ಉರಿ ಶಮನವಾಗಲು ಪ್ರೀತಿಯ ನುಡಿಗಾಗಿ
ಜೀವವದು ಕಾಯುತ್ತಿದೆ
ಕಡಲಿನೊಳಗಿನ ನಿಶ್ಯಬ್ದ ಒಮ್ಮೊಮ್ಮೆ ಭೋರ್ಗರೆದು
ಬಿಸಿಯಲ್ಲಿ ಬೇಯುತ್ತಿದೆ

ಹರಿವ ಹಾವಂತೆ ಮನವು ಸದಾ ಚಲಿಸುವ ವಾಹಿನಿ
ತೆರದಿ ಹೊರಟಿದೆಯೇಕೋ
ಗರಿಮುರಿದ ಹಕ್ಕಿಯಾಗಿ ಹೃದಯ ಕಳವಳದಿ ಸಿಲುಕಿ
ವಿಲಿವಿಲಿ ಒದ್ದಾಡುತ್ತಿದೆ

ಇರುಳು ಕವಿದ ರಾತ್ರಿಯಲ್ಲಿ ಚುಕ್ಕೆಗಳು ಇಣುಕುವದನು
ಮರೆತು ಹೋದನೇಕೆ
ವಿರಹ ತಾಪದ ಬೊಗಸೆ ಕಣ್ಣಿನ ಚಂದ್ರನ ಮುನಿಸು
ಮನವ ಕೆಣಕುತ್ತಿದೆ

ಜಲವಿರದ ಬತ್ತಿದ ಕೆರೆಯಲಿ ನೀರಡಿಸಿದ ಕರುವಂತೆ
ಕರುಣೆಯ ಅರಸಿದೆ
ಬಿಲದಂತೆ ಇಲಿಯಂತೆ ಕನಸು ಒಳಹೊರಗೆ ಸಾಗದೆ
ಸದಾ ಅಲೆಯುತ್ತಿದೆ

ಮುಗಿಯದ ಅಧ್ಯಾಯವಾಗಿ ಪುಟಪುಟದಿ ನಿತ್ಯ
ಕೊರಗುವನು ಅಭಿನವ
ಚಿಗುರದ ತರುವಿನ ಸುಮವಾಗಿ ಒಳಗೆ ಜೀವವು
ದುಃಖದಿ ಹಪಹಪಿಸುತ್ತಿದೆ


About The Author

Leave a Reply

You cannot copy content of this page

Scroll to Top