ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವನ

ಅಕ್ಷತಾ ಜಗದೀಶ

ಕರಿ ಮುಗಿಲು
ಮನದಾಳದಿ ಹುದುಗಿದ್ದ
ಪ್ರೀತಿಯ ಹೇಳಬಹುದಿತ್ತು
ಕರಿ ಮೋಡದಂತೆ
ಸುರಿವ ಮಳೆಯಾಗಿ
ಅಂದು…
ತಡೆ ಹಿಡಿಯಿತು
ಬಿಳಿಮೋಡವದು
ತಾ ಬಂದು..
ಮುಸುಕಾದ ಕಾರ್ಮೋಡ
ಮತ್ತೇಲ್ಲೋ ಕೊಂಡೊಯ್ದ
ಬಾರಿ ಬೀರುಗಾಳಿ..
ಬಯಸದ ಕಡೆ ತಾ
ಮಳೆ ಸುರಿಸದಾಯಿತು
ಮನ ಸೇರುವಲ್ಲಿಗೆ..

ಪ್ರೀತಿಯ ಕರಿಮೋಡ
ಹಾರಿತು ಬೀರುಗಾಳಿಗೆ
ದಾರ ಹರಿದ ಪಟದಂತೆ
ಸೂತ್ರವಿಲ್ಲ
ಸೂತ್ರಧಾರಿಯೂ ಇಲ್ಲ
ಕಾಣದೂರಿಗೆ ಅಲೆಮಾರಿ
ಸಾಗುವಂತೆ..

ಬಯಸದ ಊರಿಗೆ
ಒಲ್ಲದ ಮನಸಲಿ
ಮಳೆಯಾಗಿ ಸುರಿಯಿತು
ಚುಂಬಿಸಲು
ಹಸುರಾದ ಭೂಮಿಗೆ
ಮಳೆಯಾಗಿ
ಭೂಮಿಗೆ ಜೀವಜಲವಾಗಿ
ತನಗರಿವಿಲ್ಲದೆ
ಮತ್ತೆ ಕರಿಮೋಡವಾಗಿ
ಅಡೆತಡೆಗಳ ದಾಟಿ
ಮನಸಾರೆ ಭೋರ್ಗರಿಯಿತು
ತಾ ಬಯಸಿದಂತೆ
ಪ್ರೀತಿಯ ಮಳೆಯಾಗಿ…


About The Author

Leave a Reply

You cannot copy content of this page

Scroll to Top