ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ನರಸಿಂಗರಾವ ಹೇಮನೂರ

ಮಾತಾಡು ಒಂದೊಮ್ಮೆ ಮೌನ ಮುರಿದು

ಮನದ ಬೇಗುದಿಯನ್ನು
ಹೇಗೆ ಹೇಳಲಿ ನಿನಗೆ
ನಿನ್ನ ಕಣ್ಣೆದುರಿಗೇ
ಇರುವುದೆನ್ನ ಸ್ಥಿತಿಯುl
ನಿನ್ನೊಂದೆ ಕಿರು ನೋಟ
ನನ್ನ ಜೀವನಕಿಂದು
ಜೀವರಸವನೆ ತುಂಬಿ
ಹರಿವ ತೊರೆಯುl

ನಿನ್ನ ಸುಂದರ ವದನ
ನೋಡುತ್ತ ನೋಡುತ್ತ
ಕದಲದೇ ನಿಂತಿಹುವುದು
ನನ್ನ ಮನವುl
ಬೈಗು ಬೆಳಗುಗಳೆಲ್ಲ
ಯಾಂತ್ರಿಕವು ನನಗೀಗ
ನಿನ್ನ ನೆನಪಲೆ ನಾನು
ಕೊರಗುತಿಹೆ ದಿನದಿನವುl

ನಿನ್ನ ಹೊರತೀ ಜೀವ
ಬದುಕಿ ಉಳಿಯದು ಗೆಳತಿ
ನೀನಿರದ ಬದುಕೆನಗೆ
ಬರಿದೊ ಬರಿದುl
ಮನದಾಳದೀ ಮೊರೆತ
ಕೇಳಿಸದೆ ಸಖಿ ನಿನಗೆ?
ಮಾತಾಡು ಒಂದೊಮ್ಮೆ
ಮೌನ ಮುರಿದುl


ನರಸಿಂಗರಾವ ಹೇಮನೂರ

About The Author

Leave a Reply

You cannot copy content of this page

Scroll to Top