ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಭಾರತಿ ಕೇದಾರಿ ನಲವಡೆ

ಸ್ಥಿರತೆ

ಜೀವನದಲಿ ಬರುವ ಏರಿಳಿತಗಳ ಬಿರುಗಾಳಿಗೆ
ಕ್ಷಣಕ್ಷಣ ಸತ್ತು ಹುಟ್ಟುತಿಹ ಭಾವದ ಮಂಥನದ ಪಯಣ
ನಿಚ್ಚಳವಾಗುತಿವೆ ಹೊಳಹುಗಳು ಮರೀಚಿಕೆಯಾಗಿವೆ
ಆಂತರ್ಯದ ದ್ವೇಷದ ಅಗ್ನಿಗೆರೋಷದ ಸುಳಿಗೆ
ಸಾಗದೇ ಹೊತ್ತುರಿವ ದೀಪದಂತೆ ವರವಾಗಿ ಮಿಸುನಿಯ ಹೊಳಪಾದ ಬಾಳು//

ಮನದ ಕ್ಲೇಶಕ್ಕಿಲ್ಲ ಸೀಮೆಯ ಭದ್ರತೆ ಕಾಲನ ಲೀಲೆಗೆ ಬೇಧವಿಲ್ಲದ ಸಂತೆ
ಅಂತೆ ಕಂತೆಗಳ ಬಲೆಯೊಳಗೆ ವೃಥಾ ಬೇಡ ಚಿಂತೆ ಮನದಿ
ಉಪ್ಪು ತಿಂದವನು ನೀರು ಕುಡಿಯಬೇಕೆಂಬ ಕ್ಷಣದಿ
ಅನುಭಾವದ ಕುಲುಮೆಯಲಿ ಮನದ ಸ್ಥಿರತೆಯ ಗುಣದಿ
ತೂಗಿ ನೋಡದಿರು ಮಾನವೀಯತೆಯನು ಎಂದೂ ಹಣದಿ//
ಶಾಶ್ವತವಲ್ಲದ ಈ ಜನ್ಮದ ಕರ್ತವ್ಯದ ಪಯಣ
ಸಾಗುತಲಿ ತಾಳ್ಮೆ ಶಾಂತಿಯ ಬೆರೆವ ಸುಗುಣ
ಅಂತ್ಯವಿಲ್ಲದ ಕನಸಿನ ಆಶಾಗೋಪುರದ ಪ್ರಯಾಣ
ಸಹಕಾರ ತತ್ವದಲಿ ನನಸಾಗಲಿ ಸಮರಸದ ಸತ್ಕಾರ್ಯದ ಯಾಣ//

ಮನುಜಮತದಿ ಸರ್ವರಿಗೆ ಸಮಬಾಳ ಸಂಭ್ರಮ
ಸರ್ವರಲೂ ಸಮಾನತೆಯ ಭ್ರಾತೃತ್ವದ ಸಂಗಮ
ವಿಶ್ವ ಪಥದೆಡೆಗಿನ ಹೊಂಗಿರಣದ ಸ್ವಾಗತಕೆ ಹೃನ್ಮನದ ಸಮಾಗಮ
ಉಸಿರಿರುವವರೆಗೂ ಭಾವಬಂಧಗಳ ಬೆಸೆಯುವ ನೀತಿ ವಿಹಂಗಮ//


ಭಾರತಿ ಕೇದಾರಿ ನಲವಡೆ

About The Author

Leave a Reply

You cannot copy content of this page

Scroll to Top