ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಡಾ. ನಿರ್ಮಲ ಬಟ್ಟಲ

ಚಕೋರ

ಬೆಳದಿಂಗಳ ರಾತ್ರಿಯಲಿ
ಬೀಸುವ ತಂಗಾಳಿಯಲಿ
ಒಂಟಿ ಮರದ ಮುರಿದ ಕೊಂಬೆಯಲಿ ಕುಳಿತು
ಹಾಡುವ ನನ್ನ ಅನುರಾಗ
ಗೀತೆ ಕೇಳು ಚಂದ್ರಮ….

ಹೊಳಪಿಗೆ ಬಿಳುಪಿಗೆ
ನಿನ್ನ ಹೋರತು ಬೇರೆ ಹೋಲಿಕೆಯಿಲ್ಲ
ಕಾಯುವಿಕೆಗೆ ನಾನೇ
ಉಪಮಾನವು ನಲ್ಲ
ಸುರಿಸು ಬೆಳದಿಂಗಳ
ತಣಿದು ಮೈಮರೆವೆ……

ದೂಡದಿರು ಮತ್ತೆ
ಕತ್ತಲೆಯ ಮಡಿಲಿಗೆ
ತೇಲಿಸಿಬಿಡು ಪ್ರೇಮದಮಲಲಿ
ಪ್ರತಿ ಕ್ಷಣವೂ ಸಂತಸದಲಿ
ಬೇಕಿಲ್ಲ ಭ್ರಮೆ ವಾಸ್ತವದ ಗೊಡವೆ
ಈ ಪ್ರೇಮ ಬೈರಾಗಿಯ ನಿರೀಕ್ಷೆಗೆ….

ನಿನ್ನ ಚೆಲುವ ಕಣ್ಣ ತುಂಬಿಕೊಂಡು
ಒಲವ ಸುಧೆಯನುಂಡು
ಕಾಯುವೆನು ಎದೆ ಬಿರಿವ ನೋವ ಸಹಿಸಿಕೊಂಡು
ಬೆಳಕು ನೀನು ಭ್ರಮೆಯು ನಾನು
ಕಾಯುವೆನು ನೀನಗಾಗಿ
ಬರಿ ನಿನಗಾಗಿ…..!

================

ಡಾ. ನಿರ್ಮಲ ಬಟ್ಟಲ

About The Author

5 thoughts on “”

  1. Narsingrao Hemnur

    ಬೆಳಕು ನೀನು ಭ್ರಮೆಯು ನಾನು ….
    ಭಾವೋದ್ವೇಗದ ಉತ್ಕಟತೆ! ಸುಂದರ ಕವನ.

  2. ಡಾ.ನಿರ್ಮಲಾ ಬಟ್ಟಲ

    ತಾಳ್ಮೆಯ ಓದು ಮತ್ತು ನಲ್ಮೆಯ ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply

You cannot copy content of this page

Scroll to Top