ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ-ಕನ್ನಡದ ಜ್ಯೋತಿ

ವಿಜೃಂಭಿಸಿ ದಶದಿಕ್ಕುಗಳಲಿ
ಪಸರಿಸಿ ಜಗದುದ್ದಗಲಕೆ
ನಾಡ ಹಿರಿಮೆ ಗರಿಮೆ ಸಾರಿ
ಬೆಳಗಲಿ ಕನ್ನಡದ ಜ್ಯೋತಿ

ಶೌರ್ಯ ಸಾಹಸಗಳ ವನಿತೆ
ಸ್ನೇಹ ಬಂಧುತ್ವದ ಸಂಪ್ರೀತೆ
ಸುಜಲ ಸುಫಲಗಳ ಜೀವದೊರತೆ
ಹೆಮ್ಮೆಯ ಕರುನಾಡ ಮಾತೆ

ಶುದ್ಧ ಭಾವದ ಹಣತೆಯಲಿ
ನಿಷ್ಕಲ್ಮಷ ಪ್ರೇಮ ತೈಲವೆರೆದು
ಅಜ್ಞಾನದ ಬತ್ತಿ ಉರಿದು
ಬೆಳಿಗತದೋ ಕನ್ನಡದ ಜ್ಯೋತಿ

ಜಾತಿ ಮತದ ಎಲ್ಲೆ ಮೀರಿ
ಸಾಮರಸ್ಯ ಬೆರೆತು ಇಲ್ಲಿ
ಎಲ್ಲರೊಂದೆ ಎಂದುಸುರುತ
ಬೆಳಗುತಿದೆ ಕನ್ನಡದ ಜ್ಯೋತಿ..


About The Author

Leave a Reply

You cannot copy content of this page

Scroll to Top