ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ರಾಷ್ಟ್ರಪಿತನಿಗೆ ನುಡಿ ನಮನ

ಮುಷ್ಠಿಯಲಿಹಿಡಿಸುವಕಾಯದಲಿ
ಒಂದಿಷ್ಟು ಮೂಳೆಮಾಂಸರಕ್ತ
ಅದರೊಳಗಾಧ ಚೇತನದಚಿಲುಮೆ
ಮೊಗದಲಿಕಂದನಮುಗ್ಧನಗು

ಸತ್ಯ ಅಹಿಂಸೆಯಮಂತ್ರನುಡಿದು
ಜಗವನೇಮಂತ್ರಮುಗ್ಧಮಾಡಿ
ಶಾಂತಿಯನು ಬಿತ್ತಿಬೆಳೆದು
ಹಿಂಸೆಯಸದ್ದಡಗಿಸಿದಮಹಿಮ

ಪಾರತಂತ್ರ್ಯದಸಂಕೋಲೆಯಲಿ
ಸಿಲುಕಿನರಳಿದವರೆಷ್ಟೋ
ಸ್ವಾತಂತ್ರ್ಯ ಸಂಗ್ರಾಮದಬೆಂಕಿಯಲಿ
ಬೆಂದು ಹುತಾತ್ಮರಾದವರೆಷ್ಟೋ

ನೊಂದರೂಧೃತಿಗೆಡದೆಛಲಹೊಂದಿ
ಭಾರತಿಯಸೆರೆಬಿಡಿಸಿದಮಹಾತ್ಮ
ನಿನ್ನ ಜನುಮದಿನವಿಂದುರಾಷ್ಟಪಿತ
ನನ್ನನುಡಿನಮನನಿನಗೆ ಗಾಂಧಿ ತಾತ..

*******************

ಅನ್ನದಾತನ ಪ್ರಿಯ ಸಜ್ಜನಿಕೆಯ ಪ್ರತಿ ರೂಪ ಇವರಿಹರು ನೋಡು
ದೇಶ ಕಾಯುವ ಸೈನಿಕರ ಭಕ್ತಿಯ ಸೇವಕ ಎನಿಸಿಹರು ನೋಡು

ಸತ್ಯ ಪ್ರಾಮಾಣಿಕತೆಯ ಮೈಗೂಡಿಸಿಕೊಂಡವರಲ್ಲವೇ
ಸರಳ ಮುಗ್ಧ ಮನಸಿನ ಮಾನವ್ಯ ಬಂಧುತ್ವ ಗಳಿಸಿಹರು ನೋಡು

ಅಧಿಕಾರದ ಹೊನ್ನ ಗದ್ದುಗೆಯ ಏರಿಯೂ ತಾ ಪ್ರಭುವಾಗಲಿಲ್ಲ
ದೇಶದ ಪ್ರಜೆಗಳು ಹೃದಯ ಸಿಂಹಾಸನದಿ ವಿರಾಜಿಸಿಹರು ನೋಡು

ಧರ್ಮದ ದಾರಿಯಲಿ ನಡೆದ ಧೀಮಂತ ನಾಯಕ ಶಾಸ್ತ್ರಿಜೀ
ನಿಸ್ವಾರ್ಥ ಸೇವೆಯಲಿ ತೊಡಗಿ ಕರ್ತವ್ಯವನು ಅರಿತಿಹರು ನೋಡು

ಹೆತ್ತಬ್ಬೆ ಭಾರತಮಾತೆಯ ವರಪುತ್ರ ಲಾಲ್ ಬಹಾದ್ದೂರ್
ಅಜರಾಮರರಾಗಿ ಬೇಗಂ ಧ್ರುವತಾರೆಯಂತೆ ಬೆಳಗಿಹರು ನೋಡು.


About The Author

Leave a Reply

You cannot copy content of this page

Scroll to Top