ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಹಾತ್ಮ ಗಾಂಧಿ

ಎಲ್. ಹಾಲ್ಯಾನಾಯ್ಕ

)

ಓ! ರಾಷ್ಟ್ರಪಿತ,ಆವತಾರ ಪುರುಷ,ವಿಶ್ವಮಾನ್ಯ
ಮೋಹನದಾಸ ಕರಮಚಂದ ಗಾಂಧಿ ಬಾಪೂಜಿ
ಜಗವೇ ಭಕ್ತಿಯಿಂ ಗೈಯುತಿಹುದಿಂದು ನಿಮ್ಮ ಪೂಜಿ
ತಾವು ದೇವಲೋಕದಿ ಧರೆಗವತರಿಸಿದ ದೇವದೂತ
ಭಾರತಾಂಬೆಯ ಬಂಧನ ಕಳಚಿದ ಹೆಮ್ಮೆಯ ಸುತ

ಕೋಟ್ಯಾನುಕೋಟಿ ಜನತೆ ಪ್ರಶ್ನಾತೀತ ನಾಯಕ
ಸಂಯಮದಿ ಆಂಗ್ಲರ ವಿರುದ್ಧ ಹೋರಾಟದ ಕಾಯಕ
ಮಾಡಿದಿರಿ ಅಸಹಕಾರ,ಚಲೇಜಾವ್ ಚಳುವಳಿ
ನೀಡಿದಿರಿ ತಾವು ದೇಶಕ್ಕೆ ಸ್ವಾತಂತ್ರ್ಯದ ಬಳುವಳಿ
ಜಾರಿಗೆ ತರಲ್ಹೇಳಿದ್ರಿ ಮೂಲ ಶಿಕ್ಷಣ ಪ್ರಭಾವಳಿ

“ರಾಮ-ರಹೀಮ ಏಕಹೈ” ಎಂದು ಸಾರಿದಿರಿ
ಸಹಬಾಳ್ವೆಯ ಜೀವನ ಮಾರ್ಗ ತೋರಿದಿರಿ
ನುಡಿದಂತೆ ನಡೆದು ಸತ್ಯ,ನೀತಿ,ಧರ್ಮದಿ ಬಾಳಿದಿರಿ
‘ಖಾದಿ ಸುಖದ ಹಾದಿ’ಯೆಂದು ಪ್ರತಿಪಾದಿಸಿದಿರಿ
ಸಪ್ತ ಸಾಮಾಜಿಕ ಪಾಪಗಳಾಚರಿಸದಿರಲು ಹೇಳಿದಿರಿ

ಪ್ರತಿಭಟಿಸಲು ಪ್ರಯೋಗಿಸಿದಿರಿ ಸತ್ಯಾಗ್ರಹ ಅಸ್ತ್ರ
ಸ್ವಾತಂತ್ರ್ಯ ತಂದುಕೊಟ್ಟಿರಿ;ಹಿಡಿಯದೇ ಶಸ್ತ್ರಾಸ್ತ್ರ
ಪಾಲಿಸಿದ್ರಿ ಶ್ರವಣ ಪಿತೃಭಕ್ತಿ,ಹರಿಶ್ಚಂದ್ರನ ಸತ್ಯದ ಶಕ್ತಿ
ಸತ್ಯ,ಶಾಂತಿ,ಅಹಿಂಸೆ ಪ್ರತೀಕದಿ ಲೋಕಕ್ಕೆ ಮಹಾತ್ಮ
ಈಗ್ಲೂ ದೇಶಕ್ಕಾಗಿ ಬಡಿದುಕೊಳ್ಳುತಿಹುದು ನಿಮ್ಮಾತ್ಮ


About The Author

Leave a Reply

You cannot copy content of this page

Scroll to Top