ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ.

ಬಂಗಾರಿಯ ಬದುಕು ಬವಣೆ ತಡೆದು   ನೀಗಿಸುವುದು ಬಳಗ.
ಸಿಂಗಾರಿ ಭಾವನೆ ಕದಡದೆ ಒಡಲ ಉರಿಯ ತಾಗಿಸುವುದು ಬಳಗ

ಮದುವೆ,ಮುಂಜಿವೆ, ಹಬ್ಬ ಹರಿದಿನಗಳಲ್ಲಿ ಸೇರದಿರಲು ಸಾಧ್ಯವೇ.
ಇದುವೇ ಜೀವನ ಇದು ಪ್ರತಿದಿನದ ಹಾಡು ತಿಳಿಸಿ ನೀಗಿಸುವುದು ಬಳಗ

ಯಾರೂ ಯಾರಿಗೂ ಸಂಬಂಧ ಇಲ್ಲದೆ ಇರುವುದ ಕಲಿ‌ಸಿ ಕೂರಿಸಿದೆ.
ಅರಿಯದೇ ಸುಂದರ ಕ್ಷಣಗಳ  ಕೆದಕಿದರೆ ಬಾಗಿಸುವುದು ಬಳಗ.

ಸಂಸಾರದಲ್ಲಿ ನಂಜು ಬೆರೆಸದೆ ಔದಾರ್ಯದಿಂದ ನಡೆದು ತೋರಬೇಕು.
ಸಸಾರದಿ ಮಂಜು ತೆರೆಯ ಸರಿಸಿ ಧೈರ್ಯದಿ ಬೆರೆಯುದ ತೂಗಿಸುವುದು ಬಳಗ

ಅಹಂ ಬ್ರಹ್ಮಾಸ್ಮಿ ಸಲ್ಲದು ಒಲವಿನ ಒರತೆಯಲಿ ಜಯಾ ಬಲ್ಲಳು 
ಸ್ವಯಂ ತೃಪ್ತಿಯೇ ಬೆಲ್ಲವು ಬಲವಿನ ಬೆಳಕಲಿ ನಗಿಸುವುದು ಬಳಗ.


About The Author

Leave a Reply

You cannot copy content of this page

Scroll to Top