ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮನದ ಮಾತು

ಮಹೇಶ್ ಹೆಗಡೆ ಹಳ್ಳಿಗದ್ದೆ

ಮರೆಯಬೇಕು ಮನವೆ ನೀನು
ಎದೆಯಲಿರುವ ನೋವನೆಲ್ಲ
ತೆರೆಯಬೇಕು ಬೆಳಕಿನೆಡೆಗೆ
ಹೊಸತು ಹರಿದು ಬರಲಿ ಎಲ್ಲ

ಕಾಲಚಕ್ರ ಉರುಳುತಿರಲು
ಕಾಯಬೇಕು ತಾಳ್ಮೆಯಿಂದ
ಸಮಯ ಬರಲು ಸನಿಹ ಸರಿದು
ಹಾಯಬೇಕು ಧೈರ್ಯದಿಂದ

ಒಡೆದ ಒಲವಿನೆದೆಯ ಭಾವ
ಕೂಡಬೇಕು ಪ್ರೀತಿಯಿಂದ
ಸಿಡಿಲು ಬಡಿದ ಮೋಡ ಕರಗಿ
ಸುರಿಸಬೇಕು ಮಳೆಯನೊಂದ

ಉರಿಯಬೇಕು ಗುಡಿಯ ದೀಪ
ಗಾಳಿಮಳೆಗೂ ಆರದಂತೆ
ನಡೆಯಬೇಕು ಬದುಕ ದಾರಿ
ವಿಧಿಯ ನಿಯಮ ಮೀರದಂತೆ


ಮಹೇಶ್ ಹೆಗಡೆ ಹಳ್ಳಿಗದ್ದೆ

About The Author

Leave a Reply

You cannot copy content of this page

Scroll to Top