ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತಪ್ಪಿತಸ್ಥ ಭಾವ !

ಕಾಡಜ್ಜಿ‌ ಮಂಜುನಾಥ

ಒಮ್ಮೊಮ್ಮೆ
ಒಳ್ಳೆಯ
ಕೆಲಸ ಮಾಡಿದಾಗಲೂ
ತಪ್ಪಿತಸ್ಥರಾಗಬೇಕಾಗಬಹುದು
ಏಕೆಂದರೆ;
ಕಾಲನ ಬಲೆಯೇ
ಅಂತಹುದು ;
ಸತ್ಕಾರ್ಯವ
ನೋಡುವ ನರರ ಕಣ್ಗಳಲ್ಲಿ
ಪೂರ್ವಗ್ರಹ ಪೀಡಿತ ಭಾವ
ಮೂಡಿ
ಪರರಿಗೆ ತಪ್ಪಿನ ಭಾರವ
ಹೊರಿಸಲು..ಹೊಂಚು ಹಾಕಿ
ಗುಳ್ಳೆ ನರಿಯು
ಯಜಮಾನಿಕೆಯ ಏರುವ
ವಸಾಹತುಶಾಹಿಯ
ಸೊಲ್ಲು
ಕುಣಿದಾಡುತ್ತದೆ !!
ಕೊನೆಗೂ
ಸದ್ಬಾವನೆಯೇ
ಗೆದ್ದರೂ ಮೊಸರಲ್ಲಿ
ಕಲ್ಲು ಹುಡುಕುವ
ಮನದಿ
ನೀಚತೆಯ ನೆರಳಿನ
ಮಬ್ಬು
ಆವರಿಸಿ
ಹಾಸ್ಯ ಮಾಡುತ್ತದೆ !!!


About The Author

1 thought on “ಕಾಡಜ್ಜಿ‌ ಮಂಜುನಾಥ-ತಪ್ಪಿತಸ್ಥ ಭಾವ !”

  1. ಸಂಗಾತಿ ಪತ್ರಿಕೆಯಲ್ಲಿ ಪ್ರಕಟಿಸಿದ ನಿರ್ವಾಹಕರಿಗೆ ಧನ್ಯವಾದಗಳು

Leave a Reply

You cannot copy content of this page

Scroll to Top