ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕುಸುಮ ಮಂಜುನಾಥ

ಲಂಕೆಯ ಬೆಂಕಿ

ಹೊತ್ತಿ ಉರಿದಿದೆ ಲಂಕೆ
ಬೆಂಕಿ ಕೆನ್ನಾಲಿಗೆಯಲಿ
ದಂಗೆ ಎದ್ದಿಹರು ಜನರು ಬೇಸತ್ತು…

ಹಸಿದ ಕಂದಗೆ ಅನ್ನವು ಗತಿಯಿಲ್ಲ
ಗಂಜಿ ಕಾಯಿಸಲು ಅನಿಲವಿಲ್ಲ
ಇಲ್ಲಗಳ ನಡುವೆ ಬದುಕುವವರ
ಬವಣಿಗಳ ಕೇಳುವವರಿಲ್ಲ..

ಶಾಲೆ ನಡೆಸಲು ಹಣವಿಲ್ಲ
ಆಸ್ಪತ್ರೆಯಲಿ ಔಷಧಿ ಇಲ್ಲ
ಎಲ್ಲ ಸೇವೆಗಳು ಕದವ ಮುಚ್ಚಿವೆಯಲ್ಲ

ಅರಸೊತ್ತಿಗೆಯದು ದುಂದು ವೆಚ್ಚದಿ ಭೋಗಲಾಲಸೆಯಲಿ ಮೈ ಮರೆತಿರೆ…
ಲಂಕೆಯ ಅಂದ ಚಂದವ ನೋಡಲು
ಜನರು ಬರುತಿಲ್ಲ ಹಾಳಾಯ್ತು ದಿನದ ದುಡಿಮೆಯೆಲ್ಲ
ಬಹುತ್ವವದು ಒಡೆದಿತ್ತು..
ಇವ ಸಿಂಹಿಳಿ ಇವ ತಮಿಳಿನವ ಇವ ಮುಸಲ್ಮಾನನೆಂದು
ಬೇಯಿಸಿಕೊಂಡಿತು ಬೆಳೆಯನು..
ಗದ್ದುಗೆಯ ನೇರಲೆಂದು.

ಭರವಸೆಯ ತಂಗಾಳಿ ಇಲ್ಲ
ಸುಡುವ ಬೆಂಕಿಗಳೇ ಎಲ್ಲಾ
ಬೇಸತ್ತಜನ ಕಂಗಾಲಾಗಿ ನೋಡುತಿಹರಲ್ಲಾ!!

ಬೆಂಕಿಯನಾರಿಸುವ ನಾಯಕನ ಉದಯವಾಗಲೀ
ಜನಮಾನಸದಲಿ ನೆಮ್ಮದಿ ಮರುಕಳಿಸಲಿ;

=================

About The Author

Leave a Reply

You cannot copy content of this page

Scroll to Top