ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮನದಿಂಗಿತ

ಅರುಣಾ ರಾವ್

ಹಿಮ ಹೊದ್ದು ಮಲಗಿದೆ
ಅಚಲ ಬಾನಂಚಲಿ
ಮಂಜ ತೆರೆಯನೆಳೆದಿದೆ
ಭುವಿಯು ಪರದೆಯಂದದಿ

ಥರಥರನೆ ನಡುಗುತಿವೆ
ಜಗದ ಜೀವರಾಶಿಯ ಎಲ್ಲವು
ಸೂರ್ಯ ದೇವನಪ್ಪುಗೆಗೆ
ಬಯಸಿ ಕಾವ ಜನಸ್ತೋಮವು

ಮಂಜ ಮಾಲೆ ಕಿತ್ತಸೆದು
ಶಾಖ ನೀಡು ಸುಮ್ಮನೆ
ಚಳಿಯು ರೋಗ ಬಿಸಿಲೆ ಯೋಗ
ಬಾರೋ ಭಾಸ್ಕರ ಬಿರ್ರನೆ

=========================================

About The Author

Leave a Reply

You cannot copy content of this page

Scroll to Top