ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚಪ್ರಾಸಿಯೊಬ್ಬನ ರಶೀದಿ ಚೀಟಿ…!!

ದೇವರಾಜ್ ಹುಣಸಿಕಟ್ಟಿ

Madhya Pradesh Dewas Two Sanitation Workers Attacked With An Axe In Dewas  Four Held- Coronavirus के चलते MP में सैनेटाइजेशन कर रहे दो कर्मियों पर  कुल्हाड़ी से अटैक पुलिस ने 4 को

ವಸಂತವಾಗುವ ಮುನ್ನ
ಏನಿತ್ತು ಅಲ್ಲಿ…
ಒಂದಿಷ್ಟು ಪಾಪಾಸು ಕಳ್ಳಿ
ಬಾಯರಿದ ನೆಲ…
ಸುಡು ಬಿಸಿಲು…
ಮೈತುಂಬಿದ ಬೆವರ ವಾಸನೆ….
ಮತ್ತೆ ಇಷ್ಟೇ ಅಂದ್ರ್ ಇಷ್ಟೇ….

ಹರೆಯ ತುಂಬಿ ತುಳುಕಿ…
ಕಾದು ಕಬ್ಬಿಣವಾಗಿರುವ
ಎಣ್ಣೆತುಂಬಿದ ಗಾಣ…..!!

ಹೇಳದೆ ಕೇಳದೇ ಹೀಗೆ
ಇದ್ದಕ್ಕಿದ್ದಂತೆ ಮಳೆ ಸುರಿದು
ಬಿಡುವುದೇ…..

ಈಗ ತಟ್ಟನೆ

ಸುತ್ತಲೂ ಘಮಗುಡುತ್ತಿರುವ
ಮಣ್ಣ ವಾಸನೆ…
ಒಂದಿಷ್ಟು ಥೇಟ್ ಸಿಗರೇಟಿನಷ್ಟೇ
ಸಣ್ಣ ಹೊಗೆ….
ಒಂದಡಿ ಮೇಲೇದ್ದು ಕರಗಿದಾಗಲೇ
ನೆಲದ ಮೇಲೆಲ್ಲಾ
ಮಳೆಹುಳುವಿನ ಸಣ್ಣನೆಯ ನರ್ತನ….
ಚಪ್ರಾಸಿಯೊಬ್ಬ ಮೈ ನೆರೆಯುವುದೆಂದರೆ ಹೀಗೆ…

ಬಾಣೆಲೆಯಲ್ಲಿ ಕಾದ ಎಣ್ಣೆಗೆ
ಬೇಸಿಗೆಯ ಬಿರು ಬಿಸುಲಿಗೆ

ಒಣಗಿ ಮುರುಟಿದ ಹಪ್ಪಳ ಸಂಡಿಗೆ
ಹಾಕಿದರೆ ಸಿಡಿಯುತ್ತಲ್ಲ ಥೇಟ್ ಹಾಗೆ….

ಈಗ ಮತ್ತೇನಿಲ್ಲ ಅಲ್ಲಲ್ಲಿ
ನಳನಳಿಸುವ ಹೂವು…

ಯಾರದೋ ಹೆಸರಿಗೆ
ಇನ್ನ್ಯಾರದೋ ರಸೀದಿ ಚೀಟಿ
ಹರಿದಂತೆ…….!!


About The Author

Leave a Reply

You cannot copy content of this page

Scroll to Top