ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆವಿಶೇಷ

ಮಳೆಯು ಬರುತಿದೆ

ಚಂದ್ರಶೇಖರ ಹೆಗಡೆ

ಮಳೆಯು ಬರುತಿದೆ ಓ ಲಕುಲೀಶ
ಮಳೆಯು ಬರುತಿದೆ
ಧರಣಿದೇವಿಯ ಪಾದಪದ್ಮಗಳ ತೊಳೆಯಲು ಹೊಳೆಯೇರಿ ಬರುತಿದೆ
ವಸಂತವಿಡೀ ಮಲೆತು ಕೊಳೆತ
ಮನದ ಮಲಿನವ ಕಳೆಯಲೋಡಿ ಬರುತಿದೆ
ಅಂಧಕಾರದ ಕತ್ತಲೆಯ ನೀಗಿ ಜ್ಞಾನಸಾಗರದವೋಲ್ ಕರೆದು ಬರುತಿದೆ

ಮಳೆಯು ಬರುತಿದೆ ಓ ಲಕುಲೀಶ ಮಳೆಯು‌ ಬರುತಿದೆ
ಮದ್ದು ಗುಂಡುಗಳನೆಲ್ಲ ಕೊಚ್ವಿ ಮುಚ್ವಲು ಕಣಿವೆದಾರಿಯ ಹುಡುಕಿ ಬರುತಿದೆ
ಹೊತ್ತಿದ ಬೆಂಕಿ ಬಿರುಗಾಳಿಯ ತಲೆಗೆ ಕುಕ್ಕಿ ತಂಪನೆರೆದು ಹಾರಿ ಬರುತಿದೆ
ತೀರದ ದಾಹ ಮೋಹದಿಂ ನೆತ್ತಿಗೇರಿದ ಪಿತ್ತಮತ್ತುಗಳನಿಳಿಸಲು ಸೆಳೆದು ಬರುತಿದೆ

ಮಳೆಯು ಬರುತಿದೆ ಓ ಲಕುಲೀಶ
ಮಳೆಯು ಬರುತಿದೆ
ನೆಮ್ಮದಿಯ ಪುಷ್ಪಗಳನಿರಿಸಿಕೊಂಡ
ಪಾದಪಂಕಜಗಳೆಲ್ಲಿವೆ ಹೇಳು ತೊಳೆಯ ಬರುತಿದೆ
ಜಗದ ಕಾರ್ಮೋಡದ ಭೀಕರ ಕಪ್ಪು ಛಾಯೆಯನಳಿಸಿ ಬೆಳಗಿ ತೊಳಗ ಬರುತಿದೆ
ಹಸಿದ ಮನಸುಗಳ ಹಾಹಾಕಾರವ ನುಂಗಿ ಕುಣಿದು ಅನ್ನಾವತಾರವನೆತ್ತಿ ಬರತಿದೆ

ಮಳೆಯು ಬರುತಿದೆ ಓ‌ ಲಕುಲೀಶ
ಮಳೆಯು ಬರುತಿದೆ
ಬಿರಿದ ಎದೆಗಳ ಬಂಧುರ ಬಯಸಿ ಮದ್ದನರೆದು ಕುಡಿಸಲು ಉಗ್ಗಡಿಸಿ ಬರುತಿದೆ
ನೆಲದ ಹಕ್ಕಿಗಳ ಗಾನದಿ ಆರ್ದ್ರತೆ ತುಂಬಿ ತುಳುಕಿಸಲು ಹರಿದು ಬರುತಿದೆ
ಮಾವು ಬೇವುಗಳ ಕೊರಳೊಳಗಿಳಿದು ಸುಮಧುರ ರಸಾಂಭೋಧಿಯ ಹರಿಸಲು ಬರುತಿದೆ


About The Author

8 thoughts on “”

  1. ಸುಂದರವಾದ ಕವಿತೆ ಗುರುಗಳೆ .ಮನಕೆ ತಂಪನೆರೆಯಿತು

  2. ಬರಲಿ ಸರ್, ತಮ್ಮ ಕನಸಿನ ಮಳೆಗೆ ಕಾದು ಸುಸ್ತಾಗಿದೆ ಜಗವೆಲ್ಲ. ಕೂದಲು ಬಿಳಿಯಾಗಿವೆ .ನಡ ಬಾಗಿ ಕಣ್ಣು ಮಂಜಾಗಿವೆ ನಿಮ್ಮ ಪೆನ್ನಿನಿಂದಾದ ಹನಿಗಳಿಂದ ಮನ ತಂಪಾಗಿದೆ ಸೂ

Leave a Reply

You cannot copy content of this page

Scroll to Top