ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಕಲ್ಪ

ವಿಜಯಪ್ರಕಾಶ್. ಕೆ.

ಕರುಣೆ ತೋರಿದೆ ನೀನು ಕರವೆತ್ತಿ ಬೇಡಿದಗೆ
ಸೆರಗನೆಳೆಯುತಿರಲು ಅಕ್ಷಯ ವಸನವನಿತ್ತು.
ಪುರದೊಳಗಿರಲಿಲ್ಲವೇ ನೀನು ಪುರಂದರ ವಿಠಲ
ಮರುಗಲಿಲ್ಲವೇಕೆ ಅಂದು ಮಾಧವಿಯ ವ್ಯಥೆಗೆ.
ಗಾಲವನಿಂದ ಗರಬಡಿದಿತ್ತು ಅವಳ ಬಾಳಿಗೆ
ವಿಶ್ವಾಮಿತ್ರನೇ ಶತ್ರುವಾದನು ಅವಳ ಪಾಲಿಗೆ.

ಕಾಯ್ವವರೇ ಕುಕ್ಕಿತಿಂದರು ಸರದಿಯಲ್ಲಿ ಬಂದು
ಬಿಕ್ಕಿ ಬಿಕ್ಕಿ ಅತ್ತಿದ್ದು ಕಾಣಿಸಲಿಲ್ಲವೇ ನಿನಗಂದು.
ತಿಂದವರು ಉಳಿದರು ಚರಿತ್ರೆಯ ಪುಟಗಳಲ್ಲಿ
ನೊಂದವರ ಕೂಗು ಅರಣ್ಯ ರೋದನವಾಯ್ತು.
ಮತ್ತೆ ಮತ್ತೆ ಮರುಕಳಿಸುತ್ತಿದೆ ಶಕ್ತಿವಂತರ ಗೀಳು
ಕೇಳಿಸುತ್ತಿದೆ ಬದುಕು ಕತ್ತಲಾದವರ ಗೋಳು.
ಮಸ್ತಕದಿ ಲದ್ದಿ ತುಂಬಿ ಬುದ್ಧಿಜೀವಿಗಳೆಂದು ಮೆರೆಯೆ
ಸಮಸ್ತರಿಗೆ ನ್ಯಾಯ ಒದಗಿಸುವರು ಯಾರು ಹರಿಯೇ.


About The Author

Leave a Reply

You cannot copy content of this page

Scroll to Top