ತಾಯಂದಿರು
ನನಗೀಗ
ಇಬ್ಬರು
ತಾಯಂದಿರು
ಅಪ್ಪು ನೆನಪಲ್ಲಿಷ್ಟು ಕವಿತೆಗಳು ಗಜಲ್ ನಾನೊಂದು ಪ್ರಶ್ನೆ ಕೇಳುವೆ ಸರಿ ಉತ್ತರ ಹೇಳುವೆಯೇನು ವಿಧಿಯೇಅನ್ಯಾಯದ ಪರಮಾವಧಿ ಮೀರಿದ ಕಾರಣ ತಿಳಿಸುವೆಯೇನು ವಿಧಿಯೇ ಎಲ್ಲಿಂದ ಕಲಿತಿರುವೆ ಗಾಜಿನ ಮನೆಗೆ ಕಲ್ಲು ಹೊಡೆಯುವ ಕೆಟ್ಟ ಕಸುಬುಜೀವ ಜೀವನದ ಜೊತೆಗಿನ ನಿನ್ನ ಚೆಲ್ಲಾಟಕೆ ಕೊನೆಯಿಲ್ಲವೇನು ವಿಧಿಯೇ ದೊಡ್ಡ ಮನೆಯ ಬೆಳಕಿನದೇನು ತಪ್ಪು ಹೇಳು ನಿನ್ನ ದುಷ್ಟ ಕಣ್ಣು ಕುಕ್ಕಿದರೆತಪ್ಪು ಒಪ್ಪು ಒರೆಗೆ ಹಚ್ಚಿ ನಿನ್ನ ನೀನು ಸಂತೈಸಿ ಕೊಳ್ಳಬಾರದಿತ್ತೇನು ವಿಧಿಯೇ ಗೊತ್ತಲ್ಲ ಒಂದಗುಳೂ ಹೆಚ್ಚು ಕಡಿಮೆ ಇಲ್ಲದಂತೆ ತೀರುತ್ತದೊಮ್ಮೆ ಈ ಮಣ್ಣ ಋಣಹಚ್ಚ ಹಸಿರೆಲೆಗೆ ಕಫನ್ ಹೊದಿಸಿ ಬಿಟ್ಟೆಯಲ್ಲ ಈ ಆತುರ ತರವೇನು ವಿಧಿಯೇ ಕಾಲಮಿಂಚಿದ ದಾರಿಯಲ್ಲಿ ಕನಸ ಗೋರಿಯ ಸುತ್ತ ಉಮ್ಮಳಗಳೇ ಬಿಕ್ಕುತ್ತಿವೆಶೋಕ ಗೀತೆ ಮೊರೆಯುತ್ತ ಸಂತೈಸಲಾದರೂ ನೀ ಬರಬಾರದೇನು ವಿಧಿಯೇ ******************** ಡಾ.ಗೀತಾ ಪಾಟೀಲ ನೀ ಅಜರಾಮರ ನಿನ್ನ ನಟನೆ ನೋಡುತ್ತಲೆ ಹಿಗ್ಗಿ ನಲಿದವರು ನಾವುನಿನ್ನ ಸಿನಿಮಾ ನೋಡಿ ತಿದ್ದಿಕೊಂಡವರು ನಾವುಸುದ್ದಿ ಮಾಡದೆ ತಟ್ಟನೆ ಎದ್ದು ಹೋಗಿದ್ದು ತರವೇನು,ಅಪ್ಪು? ನಗು ನಗುತ್ತಲೆ, ನಗಿಸಿ ಮನ ಹಗುರಗೊಳಿಸಿದವ ನೀನುಈಗ ನಮ್ಮನ್ನಗಲಿ ಮನ ಭಾರಗೊಳಿಸಿಎಲ್ಲಿ ಮರೆಯಾದೆ ನೀನುದುಃಖದಿಂದ ಮಾತು ಮೌನ ತಾಳಿದೆಕ್ರೂರ ವಿಧಿ ಯ ಹಳಿಯವದೊಂದೆ ಉಳಿದಿದೆ ಹುಟ್ಟುತಲೆ ಅಭಿನಯಿಸಿ ಅಬಾಲವೃದ್ದರಿಗೂಮುದ ನೀಡಿದೆಪರದೆ ಮುಂದೆ,ಪರದೆ ಹಿಂದೆಯೂಮೇರು ನಾಯಕ ನೀನಾದೆ ಮೇಲಿರುವ ನಿರ್ದೇಶಕನಿಗೂ ನೀನೇ ಬೇಕಾದಿಯಾಬೇರೆ ಪಾತ್ರ ಮಾಡಲು ದೌಡಾಯಿಸಿಹೋದಿಯಾ ನಿನ್ನ ಸ್ಥಾನವ ತುಂಬುವರಾರು ರಾಜಕುವರಸುಸಂಸ್ಕೃತ, ಸದಾ ಹಸನ್ಮುಖಿ ಅಪ್ಪುಬಂಗಾರವಿನೀತ, ಪುನೀತ್ ನೀ ಅಜರಾಮರ ನಿನ್ನ ನಟನೆ ನೋಡುತ್ತಲೆ ಹಿಗ್ಗಿ ನಲಿದವರು ನಾವುನಿನ್ನ ಸಿನಿಮಾ ನೋಡಿ ತಿದ್ದಿಕೊಂಡವರು ನಾವುಸುದ್ದಿ ಮಾಡದೆ ತಟ್ಟನೆ ಎದ್ದು ಹೋಗಿದ್ದು ತರವೇನು,ಅಪ್ಪು? ನಗು ನಗುತ್ತಲೆ, ನಗಿಸಿ ಮನ ಹಗುರಗೊಳಿಸಿದವ ನೀನುಈಗ ನಮ್ಮನ್ನಗಲಿ ಮನ ಭಾರಗೊಳಿಸಿಎಲ್ಲಿ ಮರೆಯಾದೆ ನೀನುದುಃಖದಿಂದ ಮಾತು ಮೌನ ತಾಳಿದೆಕ್ರೂರ ವಿಧಿ ಯ ಹಳಿಯವದೊಂದೆ ಉಳಿದಿದೆ ಹುಟ್ಟುತಲೆ ಅಭಿನಯಿಸಿ ಅಬಾಲವೃದ್ದರಿಗೂಮುದ ನೀಡಿದೆಪರದೆ ಮುಂದೆ,ಪರದೆ ಹಿಂದೆಯೂಮೇರು ನಾಯಕ ನೀನಾದೆ ಮೇಲಿರುವ ನಿರ್ದೇಶಕನಿಗೂ ನೀನೇ ಬೇಕಾದಿಯಾಬೇರೆ ಪಾತ್ರ ಮಾಡಲು ದೌಡಾಯಿಸಿಹೋದಿಯಾ ನಿನ್ನ ಸ್ಥಾನವ ತುಂಬುವರಾರು ರಾಜಕುವರಸುಸಂಸ್ಕೃತ, ಸದಾ ಹಸನ್ಮುಖಿ ಅಪ್ಪುಬಂಗಾರವಿನೀತ, ಪುನೀತ್ ನೀ ಅಜರಾಮರ ***************** ಲಕ್ಷ್ಮೀದೇವಿ ಪತ್ತಾರ ಕಾಯುತಿದೆ ಸಾವನ್ನಪ್ಪಲುಕೈ ಚಾಚಿ ಕಾದವರು ಎಷ್ಟೋ ಮಂದಿಎಲ್ಲರನ್ನು ದಾಟಿಪುನೀತನನ್ನು ಅಪ್ಪಿದೆಯ ವಿಧಿ ನಲ್ವತ್ತಾರರ ಹೃದಯಕೊಂಡೊಯ್ಯುವ ಕ್ರೂರತೆ ನಿನಗೇಕೆಆಟವಾಡಲು ಹರೆಯದಜೀವವೇ ಬೇಕೇ ತಪ್ಪಾಗಿದ್ದರೆ ತಿದ್ದಿಕೊತಿರುಗಿ ಕಳಿಸಿಬಿಡುಕಾಯುತ್ತಿದೆ ಕನ್ನಡ ನಾಡು ********************* ನಾಗರತ್ನ ಎಂ.ಜಿ ಈ ಸಾವು ನ್ಯಾಯವೇ ಕನ್ನಡ ನಾಡಿನವೀರ ಕನ್ನಡಿಗ.ಯುವ ರತ್ನನದಿಡೀರ್ ನಿರ್ಗಮನ| ಕನ್ನಡಿಗರ ಮನಗೆದ್ದರಾಜಕುಮಾರ. ನಟನೆಯಲ್ಲಿನಟ ಸಾರ್ವಭೌಮ.ಅಗಲಿಕೆ ನ್ಯಾಯವೇ? ಕನ್ನಡ ಚಿತ್ರರಂಗದ ಅರಸುಕನ್ನಡದ ಪವರ್ ಸ್ಟಾರ್ಕಣ್ಣೀರು ಕೋಡಿಯಾಗಿದೆನಿಮ್ಮ ಅಕಾಲಿಕ ನಿಧನ. ದೊಡ್ಮನೆ ಹುಡುಗನಿನಗೆ ನೀನೇ ಸಾಟಿ.ಯಾವ ಚಕ್ರವ್ಯೂಹದಲ್ಲಿಸಿಲುಕಿದೆಯೋ ಅಪ್ಪು. ಮತ್ತೊಮ್ಮೆ ಜನಿಸಿ ಬಾಅಂಜನಿಪುತ್ರನಿನ್ನಿಂದಲೇ ಪಾವನವಾಗಲಿಕನ್ನಡ ನಾಡು. ************ ನಾಗರಾಜ ಎಮ್ ಹುಡೇದ
ಅಪ್ಪು ನೆನಪಲ್ಲಿಷ್ಟು ಕವಿತೆಗಳು Read Post »
You cannot copy content of this page