ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಹುಟ್ಟುತ್ತಿಲ್ಲ ಕವಿತೆ

ಡಾ.ಸುರೇಖಾ ರಾಠೋಡ್

ಇತ್ತೀಚೆಗೆ ನನ್ನಲ್ಲಿ ಕವಿತೆಗಳೇ
ಹುಟ್ಟುತಿಲ್ಲ
ಅದೇಕೋ
ಗೊತ್ತಿಲ್ಲ!
ಮತ್ತೆ ಮತ್ತೆ
ಕಾಡುವ
ಕೆಟ್ಟ ಕನಸುಗಳಂತೆ
ಹುಟ್ಟುತ್ತಿಲ್ಲ ಕವಿತೆ…
ಅದೇಕೋ
ಗೊತ್ತಿಲ್ಲ!

ಮನದ ತುಂಬೆಲ್ಲ
ಎದ್ದ,
ಸಮಾಜದ ಅಂಕುಡೊಂಕಗಳ,
ದೌರ್ಜನ್ಯ, ಹಿಂಸೆಗಳ
ಕುರಿತು
ಸಾವಿರಾರು
ಪ್ರಶ್ನೆಗಳಿಗೆ
ಕವಿತೆಯ ಮೂಲಕ
ಕೇಳ ಬೇಕಿದೆ
ಉತ್ತರ…
ಆದರೂ ಅದೇಕೋ
ಗೊತ್ತಿಲ್ಲ
ಹುಟ್ಟುತಿಲ್ಲ
ಕವಿತೆಯ
ಸಾಲುಗಳು…
ಕೇಳಬೇಕಿದೆ
ಸಮಾಜಕ್ಕೆ,
ಅಸಮಾನತೆಯ‌‌ ಕುರಿತು
ಅತ್ಯಾಚಾರದ ಕುರಿತು
ಹೆಣ್ಣು ಮಕ್ಕಳ ಮೇಲಿನ ಹಿಂಸೆಯ ಕುರಿತು
ಆದರೂ
ಅದೇಕೋ ಗೊತ್ತಿಲ್ಲ!
ಇತ್ತೀಚೆಗೆ
ಹುಟ್ಟುತ್ತಿಲ್ಲ
ಕವಿತೆಯ ಸಾಲುಗಳು…
………

About The Author

Leave a Reply

You cannot copy content of this page

Scroll to Top