ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಭಿತ್ತಿ ಚಿತ್ರ

ಶಾಂತಲಾ ಮಧು

ಬಟ್ಟಂಬಯಲಲಿ
ಮೂಲೆಯ ಮರದಲಿ ಅಂಟಿದ
ಕಪ್ಪುಬಿಳುಪಿನ
ಭಿತ್ತಿ ಚಿತ್ರ
ಬಣ್ಣತೊಡಿಸುವಾಸೆಯಲಿ
ಮುಟ್ಟಿ ಶೃಂಗರಿಸಿ
ಮೆರಗಿಟ್ಟು ಮತ್ತಸ್ಟು

ನಲಿದೆ ನರ್ತಿಸಿದೆ
ಏರಿತದು ಏರಿತದು
ಬಾನ ಅಂಗಳದಲ್ಲಿ
ಬಣ್ಣ ಬಣ್ಣದ
ಕಾಮನ ಬಿಲ್ಲಾಗಿ
ಜಿನುಗು ಮಳೆಯಲ್ಲಿ
ಬಣ್ಣವಾಗಿಸಿ ನೆಲವ

ಗಾಳಿಯದು
ಮಧುರ ನುಡಿಯದು
ಇಂಪು ಸೊಂಪಿನಲಿ
ತೇಲಿಸಿ ತೇಲಿಸಿ
ಮೇಲೇರಿತು ಎತ್ತರಕೆ
ಕಟ್ಟಿ ಅಲ್ಲಲ್ಲಿ
ಗೋಪುರವ
ಹಗಲ ಕನಸಾಗಿ
ಇರುಳ ಹಗಲಾಗಿಸಿ

ಇರುಳೇ ಬಿಸಿಯಾಗಿ
ಮೋಡ ಕರಗಲು
ಹನಿಯಾಗಿ ಹನಿಯಾಗಿ
ಬಣ್ಣ ಕರಗಿದ
ಭಿತ್ತಿ ಚಿತ್ರವಾಗಿ

ಪ್ರಜ್ಞೆ ಬಂದಾಗ
ನೆಲದ ಮೇಲಿತ್ತು
ಮಣ್ಣಿನವಾಸನೆ
ಮೈಗಂಟಿದ ಮಣ್ಣು
ಮುಗುಳ್ ನಕ್ಕು
ಹಸಿರನೆಲವದು
ಉಸಿರಿಗೆ ಆಹ್ವಾನ
ಬದುಕು ಭ್ರಮೆಯಲ್ಲ
ನಿತ್ಯ ಸತ್ಯ ಎನುತಿತ್ತು
ಆ ಮರ ಗಿಡ ಬಳ್ಳಿಗಳು


About The Author

Leave a Reply

You cannot copy content of this page

Scroll to Top