ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಮಣ್ಣು ,ಅನ್ನ ಮತ್ತು ಪ್ರಭು

ನೆಲಕೆ ಬಿದ್ದರೆ ಅನ್ನದಾತ
ದಂಗೆಯೇಳುತ್ತದೆ ಅನ್ನ

*

ಮಕ್ಕಳ ಮುಂದೆ ಅಪ್ಪ ಅಳಬಾರದು
ಅಪ್ಪನ ಮುಂದೆ ಮಕ್ಕಳು ಸಾಯಬಾರದು
ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು

ಸುಳ್ಳಾಯಿತು
ಲೋಕರೂಢಿಯ ಮಾತು.

*

ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳು
ನೆಲದ ಮೇಲಿರುವ ತನಕ

ಅದೇ ಮಣ್ಣಿನ ಮೃದು ಪಾದಗಳು
ನೆಲದಡಿಗೆ ಸೇರಿದವನ ಎದೆಯ ಮೇಲೆ

*

ಮಣ್ಣಿಗೂ
ಅಪ್ಪನಿಗೂ ಸಂಬಂಧ ಕೇಳುವಿರಿ ನೀವು

ಇದೆ
ಅಜ್ಜ-ಮೊಮ್ಮಗನ ಸಂಬಂಧ!

*

ಉಣ್ಣುವ ಅನ್ನದ ಕಣ್ಣು
ಎದುರಿಸಲಾಗದ ಕೊಲೆಗಾರ

ಹೇಡಿ
ಹೇಡಿಯೆಂದು ಕಿರುಚಾಡುತ್ತಾನೆ

*

Agriculture - Wikipedia

ಕಳಚಿ ಬಿದ್ದಿವೆ
ಪದವಿಗಳು,ಪುರಸ್ಕಾರಗಳು
ಅಕ್ಷರಗಳು….ಬೀದಿಯ ತುಂಬಾ

ನಾನೀಗ
ಲೋಕದ ಸಾಲಿಯ ಪಾಲಿಗೆ ಬೆತ್ತಲೆ ಅಪರಾಧಿ


            ಬಿ.ಶ್ರೀನಿವಾಸ


About The Author

1 thought on “ಮಣ್ಣು ,ಅನ್ನ ಮತ್ತು ಪ್ರಭು”

  1. ಇಂಥಾ ಕವಿತೆಗಳು ಜನರ ಕಣ್ಣು ತೆರೆಸಬೇಕು. ಜನ ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅಭಿನಂದನೆಗಳು ಕವಿಗಳಿಗೆ

Leave a Reply

You cannot copy content of this page

Scroll to Top