ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಪ್ರಕೃತಿ ವಿಕೋಪ

ಶಾಲಿನಿ ಕೆಮ್ಮಣ್ಣು

Here's how you can help flood-hit people of Kerala | Kochi News - Times of  India

ಅಕಾಲದಲ್ಲಿ ಬಾನಿಂದ
ಆರ್ಭಟಿಸಿತು ಮೇಘ
ಅಪ್ಪಳಿಸಿತು ಬರಸಿಡಿಲು
ಅಮಾಯಕ ಜೀವದ ಮೇಲೆ
ತಿಂಗಳೆರಡಾಯಿತು
ಜೀವ ಉಳಿದರೂ ಚೇತರಿಸಲಿಲ್ಲ
ಜೀವ ಶವವಾದ ಯುವಕ

ಮತ್ತೆ ಸುಡಲು ಸೂರ್ಯ
ಉರಿಬಿಸಿಲಿಗೆ ಎಲ್ಲೆಡೆ
ಅನಾರೋಗ್ಯದ ತಾಂಡವ
ಮತ್ತೆ ಭೀತಿಯ ವಾತಾವರಣ

ಉರಿಬಿಸಿಲ ದಿನದ ಸಂಜೆ
ಸುರಿಯಿತು ಮುಗಿಲು
ನುಗ್ಗಿತು ರಭಸದಿ ಮನೆಗಳಿಗೆ ಜಲರಾಶಿ
ಗಂಟೆಗಳಲ್ಲಿ ನಗರಗಳು ನೀರಸಾಗರ

ಪ್ರಕೃತಿಯೇ ರೂಪಿಸಿದ
ಜನರ ಮೇಲೆದೌರ್ಜನ್ಯವೇ,
ಈ ರೀತಿ ತಿರುಗಿ ಬೀಳುವುದು ಸರಿಯೇ
ಸ್ವೇಚ್ಛಾಚಾರಿಯಂತೆ ವರ್ತಿಸುವ,
ಪದೇಪದೇ ಬಣ್ಣ ಬದಲಿಸುವ
ಸಮಯ ಸಾಧಿಸುವ ಜನತೆಗೆ ತಿರುಗೇಟೇ ?


About The Author

1 thought on “ಪ್ರಕೃತಿ ವಿಕೋಪ”

Leave a Reply

You cannot copy content of this page

Scroll to Top