ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬಿ.ಶ್ರೀನಿವಾಸ ಹೊಸ ಕವಿತೆ

ಗೊತ್ತೇ ಆಗಲಿಲ್ಲ

ಬಣ್ಣಗಳು ಹೇಗೆ ಕಳಚಿಕೊಂಡವೆಂದು
ಊರುಗಳಿಗೂ ಗೊತ್ತೇ ಆಗಲಿಲ್ಲ

ಗಾಯಗೊಂಡು ರಕ್ತ ಸುರಿಸಿದರೂ ಊರ ಶರೀರ
ಗೊತ್ತೇ ಆಗಲಿಲ್ಲ
ಅರವಳಿಕೆ ನೀಡಿದವರಾರೆಂದು

ಈಗೀಗ…
ಮಕ್ಕಳು ಬಿದ್ದರೆ….
ಅತ್ತರೆ…
ಅವ್ವಂದಿರುಗಳಿಗೂ ಗೊತ್ತಾಗುವುದಿಲ್ಲ

ಶೋಧಿಸಬೇಕಿದೆ ಗೆಳೆಯಾ..
ಎದೆಯ

ಅಪರಾಧ ಎಸಗದೆಯೂ,
ಜೈಲಿನ ಗೋಡೆಗಳೊಂದಿಗೆ ಮಾತನಾಡುವ
ಊರುಗಳ ಎದೆಯಾ

ಅಸ್ಪೃಶ್ಯನೊಬ್ಬ ಊರೊಳಗೆ ಬಂದರೆ….
ನೆನಪಿಟ್ಟುಕೊಂಡ
ಸ್ಪರ್ಶ ಜ್ಞಾನಕೆ
ಆಶ್ಚರ್ಯವಾಗುತಿದೆ

ಶೋಧಿಸಬೇಕಿದೆ ಗೆಳೆಯಾ..
ಎದೆಯ

ಬಣ್ಣ
ರುಚಿ
ಶಕ್ತಿ
ಕಳೆದುಕೊಂಡವರ
ಶೋಧಿಸಬೇಕಿದೆ ಗೆಳೆಯಾ


About The Author

3 thoughts on “ಗೊತ್ತೇ ಆಗಲಿಲ್ಲ”

  1. ಹೌದು
    ಶೋಧಿಸಬೇಕಿದೆ ನಮ್ಮ ನಮ್ಮ ಎದೆಗಳ
    ಸಿಕ್ಕರೂ ಸಿಗಬಹುದು ಕಳೆದು ಹೋದ ಸಂಪತ್ತು
    ಕವಿಗೆ ಅಭಿನಂದನೆಗಳು

Leave a Reply

You cannot copy content of this page

Scroll to Top