ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಕಡೇ ಮಾತು

ವಿಭಾ ಪುರೋಹಿತ

ತಡೆಯಬೇಡ ಗೆಳತಿ
ಅಳೆಯಬೇಡ
ಪಾವತಿಸಬೇಡ
ಕಡ ಕೊಟ್ಟಾದರೂ
ಕ್ಷಣಗಳ ಕರೆತರುವೆ

ಊರದೇವರ ಮುಂದೆ
ಬಲದ ತಿರುವಿನಲ್ಲಿ
ಮೀನು ಬಾಜಾರಿನಲಿ
ಒತ್ತಡದ ಕೆಲಸದಲ್ಲಿ
ಫೋನು ಎತ್ತಿದ್ದೇ ತಡ
ಕಡೆಗೆ ಮಾಡುವೆನೆಂದು
ಕೊರಳ ಕತ್ತರಿಸುತ್ತಾಳೆ

ಕಡೇ ಮಾತಿಂದ
ಭಾವನೆಗಳ ಭಾಗಿಸಿದರೂ
ನಿಶ್ಶೇಷವಾಗಲಾರೆ
ಕಡಗೋಲು ಆಡಿಸಿದಂತೆ
ಚಡಪಡಿಸಿ
ಉದಿಸಲಾರದ ನವನೀತ
ತುಟಿಯಲ್ಲಿ ಕಮರಿ
ಕವಿತೆಯಾಗದೇ ಒಣಗಿ
ಉಳಿದ ಮಾತುಗಳ ಚರಟ
ಕಥೆಯ ಬರೆಸುವಹಾಗೆ
ಲೋಟದಲಿ ನಿರ್ಜಲ
ನಿಟ್ಟುಸಿರನ್ನೇ ಗಟಗಟ
ಕುಡಿಸಿದಳು
ಹುಳಿತೇಗು ಹೂಂಕರಿಸಿದಾಗ
ಮಥಿಸದ ಮಾತುಗಳ
ಅಜೀರ್ಣತೆ ಅರ್ಥವಾಗಿದ್ದು

ಗೆಳೆತನವೆಂದರೆ
ಬರೀ ಕೆನೆಗಟ್ಟುವದಲ್ಲ
ಕವಿತನದಲಿ ಘಂಮೆನುವ
ಘೃತವಲ್ಲವೇ…..

***************************

About The Author

Leave a Reply

You cannot copy content of this page

Scroll to Top