ದೇವರ ಕೊಡುಗೆಗಳು.
( ಇಂಗ್ಲೀಷ್ ಕವಿತೆಯೊಂದರ ಭಾವಾನುವಾದ )
God”s gifts – Alon calunao
ಎಂ. ಅರ್. ಅನಸೂಯ
ಕಾವ್ಯಯಾನ ಮರೆಯದ ನೆನಪು ಶೃತಿ ಮೇಲುಸೀಮೆ ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸುದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲುಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು ತುಂಬಿತ್ತು ತನ್ನತನವನುಳಿಸಿಕೊಂಡು, ಅನ್ಯಮತವನು ಗುಣಿಸಿಕೊಂಡುಅಂಧಕಾರವ ಮರೆಸಿ, ಕಲಿತ ಸಾಲಿಲೇ ಪಾಠ ಹೇಳೋಕೆ ಹೋಗೋತರಾಯ್ತು ಹೋಗೋ ದಾರಿಲಿ ಯವ್ವಾ ನನ್ನ ಮಗಿನು ನಿನ್ನಂಗ ಮಾಡವ್ವ ಅನ್ನೋ ಮಾತುಆಗ್ಲಿಯವ್ವ ಮಗಿನ ದುಡಿಯಕ ಹಚ್ಚದೆ,ಶಾಲಿಗೆ ಕಳ್ಸು ಅಂದಾಗ ಹ್ಮ್ ಗುಟ್ಟಿದ ಮನಸು ಬಾಲ್ಯದಲ್ಲಿ ಕಂಡ ಕನಸು, ಅನುಭವಿಸಿದ್ದ ತ್ರಾಸುಬದುಕು ಹೇಳ್ಕೊಟ್ಟ ನೀತಿ, ಸಾರ್ಥಕ ಅನ್ಸಿತ್ತು
ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ ಅವರ ಪಾಡಿಗೆ; ನಾವೂ ಆಡಿಕೊಳ್ಳೋಣ ನಮ್ಮ ಪಾಡಿಗೆ ಎಂಬರ್ಥದಲ್ಲಿ ಈ ಮಾತು ಬಳಕೆ ಆಗಿರುತ್ತದೆ. ಇಲ್ಲಿ ಸಣ್ಣಮಕ್ಕಳಿಗೆ ದೊಡ್ಡವರ ಗುಂಪಿನಲ್ಲಿ ತಾವೂ ಆಡಿದೆವೆಂಬ ಖುಷಿ ಸಿಕ್ಕರೆ, ದೊಡ್ಡವರಿಗೆ ತಮ್ಮ ಆಟದ ನಿಯಮಗಳಿಗೆ ಮಕ್ಕಳಿಂದ ತೊಂದರೆ ಆಗಲಿಲ್ಲ ಎಂಬ ಸಮಾಧಾನ! ಈ ಖುಷಿ – ಸಮಾಧಾನ ಸ್ಥಾಯಿಯಲ್ಲ. ಯಾರನ್ನು ಆಟಕ್ಕುಂಟು ಲೆಕ್ಕಕ್ಕಿಲ್ ಲವೆಂದು ಪರಿಗಣಿಸಿ ಹಾಗೆ ನಡೆಸಿಕೊಳ್ಳಲಾಗಿರುತ್ತದೆಯೋ ಅವರಿಗೆ ಸ್ವಲ್ಪ ತಿಳುವಳಿಕೆ ಮೂಡುತ್ತಿದ್ದಂತೆಯೇ, ತನ್ನನ್ನು ಗುಂಪಿನಿಂದ ಪ್ರತ್ಯೇಕಿಸಲಾಗಿದೆ ಎನ್ನುವುದು ಅರ್ಥ ಆಗುತ್ತದೆ. ಆಗ ಮೊದಲಿಗೆ ಅವರ ಮನಸ್ಸಿಗೆ ಘಾಸಿಯಾಗುತ್ತದೆ! ಅನಂತರ ದುಃಖ ಮೂಡಿ; ಕೊನೆಗೆ ಅದು ಸಿಟ್ಟು, ಕೋಪಕ್ಕೆ ಮೂಲವಾಗಿ ದ್ವೇಷ-ರೋಷದ ಕಿಡಿ ಹೊತ್ತಿಸಿ ಇತರರೊಡನೆ ಜಗಳವಾಡಿಕೊಂಡು, ದೂರು ಹೇಳಿ, ಗಲಾಟೆ ಎಬ್ಬಿಸಿ ಆಟದ ಆನಂದವನ್ನೇ ಕೆಡಿಸಬಹುದು ಅಥವಾ ಆಟವನ್ನೇ ಮುಕ್ತಾಯಗೊಳಿಸುವ ಕೊನೆಯ ಹಂತಕ್ಕೆ ಮುಟ್ಟಬಹುದು. ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘ಗುಡ್ ಫಾರ್ ನಥಿಂಗ್’ ಎಂದು. ಇದನ್ನೂ ಸಹ ನಮ್ಮ ‘ಆಟಕ್ಕುಂಟು …’ ಎನ್ನುವ ನುಡಿಗಟ್ಟಿನಂತೆಯೇ ಬಳಸುವುದುಂಟು. ಅಪ್ರಯೋಜಕರಿಗೆ, ನಿಷ್ಪ್ರಯೋಜಕರಿಗೆ ಬೆಟ್ಟು ಮಾಡಿ ತೋರಿಸುವಾಗ ಈ ಮಾತು ಹೇಳಲಾಗುತ್ತದೆ. ಎಂದರೆ ಮನುಷ್ಯ ಒಳ್ಳೆಯವರೇ, ಆದರೆ ಏನೂ ಉಪಯೋಗವಿಲ್ಲ! ಉಪಯೋಗಕ್ಕೆ ಬಾರದ ಒಳ್ಳೆಯತನ ಕಟ್ಟಿಕೊಂಡು ಪ್ರಯೋಜನವೇನು? ಎಂದು ಕೇಳಬಹುದಾದ ಪ್ರಶ್ನೆಗೆ, ಒಳ್ಳೆಯದ್ದೇ ಅಪರೂಪ ಆಗುತ್ತಿರುವ ಈ ಸಂದರ್ಭದಲ್ಲಿ ಕಡೇಪಕ್ಷ ಅಂತಹ ಗುಣವನ್ನು ತೋರುವವರಾದರೂ ಇದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆನ್ನುವ ಉತ್ತರ ನೀಡಬಹುದೇ? ಆಟ ಎಂದರೆ ಎಷ್ಟೊಂದು ಬಗೆ ನೆನಪಾದರೂ ‘ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆಯೋಕೆ..’ ಸಾಧ್ಯವೇ ಇರೋಲ್ಲ. ನಮ್ಮ ಬಾಲ್ಯ ಕಾಲದ ಆಟಗಳ ಮುಂದೆ ಈಗಿನ ಮಕ್ಕಳ ಇಂಟರ್ನೆಟ್ಟಿನೊಳಗಿನ ವೀಡಿಯೋ ಗೇಮಾಟಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಮಣ್ಣಿನೊಡನೆ ಆಡಿರೆಂದರೆ ಮೂಗು ಮುರಿದುಕೊಳ್ಳುವ ಈ ಮಕ್ಕಳಿಗೆ ಇಂಡೋರ್ ಗೇಮ್ ಎಂದರೆ ಕೇರಂ, ಚೆಸ್, ಪಗಡೆ, ಅಳಿಗುಣಿ ಮನೆ, ಚೌಕಾಬಾರ, ಹಾವು ಏಣಿ ಮೊದಲಾದವು ನೆನಪಾಗುವುವೇ? ಧರ್ಮರಾಯನೂ ಸಹ ಇಂಡೋರ್ ಗೇಮೆಂಬ ದ್ಯೂತದಲ್ಲಿ ಸೋತವನೇ.. ಸೋತವನು ಅನಂತರ ಗೆದ್ದವನಾದುದೇ ಒಂದು ದೊಡ್ಡ ರಾಮಾಯಣ..! ಅಲ್ಲಲ್ಲ ಮಹಾಭಾರತ. ‘ದೇವರ ಆಟಾ ಬಲ್ಲವರಾರು…?’ ಎನ್ನುತ್ತಾ ‘ಎಲ್ಲಾ ವಿಧಿಯ ಲೀಲೆ ನರಮಾನವನ ಕೈಯಲ್ಲಿ ಏನಿದೆ?’ ಎಂದು ಯಾವ ಜವಾಬ್ದಾರಿಯನ್ನೂ ಹೊರಲಾರದವರು ಹೇಳಿ ಕೈ ತೊಳೆದುಕೊಂಡು ಬಿಡುವುದುಂಟು. ಇದು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಯುದ್ಧ ಎಂದಾಗ ನೆನಪಾಗುವುದು ನೋಡಿ, ಹೊಡಿಬಡಿಕಡಿ,ಹುಡುಕಿ ಕೊಚ್ಚು, ಅಟ್ಟಾಡಿಸಿ ಕೊಲ್ಲು, ಬಾಂಬ್ ಹಾಕು, ಬಂದೂಕಿನಿಂದ ಗುರಿಹಿಡಿ, ಎದೆ ಸೀಳು, ರಕ್ತ ಬಸಿ ಎನ್ನುವಂತಹ ವೀಡಿಯೋ ಗೇಮ್ ಗಳನ್ನು ಈಗತಾನೇ, ತಾಯ ಮೊಲೆಹಾಲು ಕುಡಿದು ಬಿಟ್ಟ ತುಟಿಗಳಲ್ಲಿ ಹಸಿಹಾಲಿನ ವಾಸನೆ ಆರಿರದ ಕಂದಮ್ಮಗಳು ಆಡುತ್ತಿರುವುದು ಭೀಭತ್ಸಕ್ಕೆ ನೈಜ ಉದಾಹರಣೆ. ಹೀಗೆ ಆಡುವುದೇ ಮಜಾ ಎಂಬಂತೆ, ಬ್ರೈನ್ ವಾಷ್ಗೆ ಒಳಗಾಗುವ ಮಕ್ಕಳ ಕೈಯಲ್ಲಿ ಎಕೆ-೪೭ ರಂತಹ ರಣಮಾರಿಯ ಕೈಯ ಆಯುಧ ಸಿಕ್ಕರೆ ತಮ್ಮ ಖುಷಿಗಾಗಿ ಅನ್ಯ ಸಹಜೀವಿಯನ್ನು ಕೊಂದು ತೀರದಿರರೇ? ‘…ಆಟ ಊಟ ಓಟ ಕನ್ನಡ ಮೊದಲನೆ ಪಾಠ..’ ಎಂದು ಚಿಕ್ಕಂದಿನಲ್ಲೇ ಕಲಿಯುತ್ತಾ ಬೆಳೆದ ನಾವು ದೊಡ್ಡವರಾದ ಮೇಲೆ ಹೇಳ್ತೀವಿ, ‘ನಿನ್ನಾಟ ನನ್ಹತ್ರ ನಡೀಯಲ್ಲಮ್ಮಾ..’ ಎಂದು. ಆದ್ರೆ ಕೃಷ್ಣನಾಟಕ್ಕೆ ಮಾತ್ರ ಸುಮ್ಮನೆ ಮಾತಿಗೆಂಬಂತೆ, ‘ಬೇಡ ಕೃಷ್ಣಾ ರಂಗಿನಾಟ..’ ಎಂದು ಹುಸಿ ಮುನಿಸು ತೋರಿದರೂ ಒಳಗೊಳಗೆ ಪುಳಕಗೊಂಡು ಸಂಭ್ರಮಿಸ್ತೀವಿ! ಕೃಷ್ಣ ಬರಿಯ ರಂಗಿನಾಟಗಳನ್ನು ಮಾತ್ರ ಆಡಿದವನಲ್ಲ, ರಾಜತಾಂತ್ರಿಕ ನೈಪುಣ್ಯ ಸಾಧಿಸಿದವನು ಎಂದೆಲ್ಲಾ ಕೊಂಡಾಟ ಮಾಡಿದರೂ ನಮಗೆ ಇಷ್ಟವಾಗಿ ಮನಸ್ಸಿಗೆ ಹತ್ತಿರವಾಗೋದು ಗೋಪಬಾಲನ ಬಾಲ್ಯದ ಆಟಗಳ ಸೊಗಸುಗಾರಿಕೆಗಳೇ.. ಒಂದೊಂದು ಪ್ರದೇಶಕ್ಕೂ ವಿಶಿಷ್ಟವಾದ ಸ್ಥಳೀಯ ಆಟಗಳಿರುತ್ತವೆ. ಭಾರತ-ಹಾಕಿ, ಅಮೇರಿಕ- ರಗ್ಬಿ, ಸ್ಪೇನ್- ಗೂಳಿ ಕಾಳಗ, ಆಸ್ಟ್ರೇಲಿಯಾ- ಕ್ರಿಕೆಟ್, ಬಾಂಗ್ಲಾದೇಶ- ಕಬಡ್ಡಿ, ಚೀನಾ – ಪಿಂಗ್ ಪಾಂಗ್, ಜಪಾನ್- ಸುಮೋ, ಭೂತಾನ್-ಆರ್ಚರಿ…. ಹೀಗೆ ಹಲವು ರಾಷ್ಟ್ರಗಳು ತಮ್ಮ ರಾಷ್ರೀಯ ಕ್ರೀಡೆಗಳನ್ನು ಇವೇ ಎಂದು ಘೋಷಿಸಿಕೊಂಡಿವೆ. ಇದರ ಜೊತೆಗೇ, ಭಾರತದಂತಹ ಸಂಯುಕ್ತ ಒಕ್ಕೂಟ ರಾಷ್ಟ್ರದಲ್ಲಿ ಕಬಡ್ಡಿ, ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಸ್ಪರ್ಧೆ, ದೋಣಿ ಸ್ಪರ್ಧೆ, ಮರ ಏರುವುದು, ಬುಗುರಿ, ಚಿನ್ನಿದಾಂಡು, ಅಪ್ಪಾಳೆ ತಿಪ್ಪಾಳೆ, ಮುದ್ದೆ ನುಂಗುವುದು, ಗದ್ದೆ ನಾಟಿ ಮಾಡುವುದು…, ಹೀಗೆ ಹಲವು ಪ್ರಾದೇಶಿಕ ಆಟಗಳನ್ನು ಹಾಗೂ ಕೆಲವು ಸೀಸನಲ್ ಆಟಗಳನ್ನೂ ಆಡುವುದುಂಟು. ಆಟವನ್ನು ಆಟ ಎಂದರೆ, ಏನೋ ಲಘುತ್ವ ಭಾವ. ಹಾಗಾಗಿ, ಕ್ರೀಡೆ ಎಂದು ಕರೆದು ಅದಕ್ಕೆ ಗಾಂಭೀರ್ಯವನ್ನು ಆರೋಪಿಸಲಾಗುತ್ತದೆ. ಹೌದಲ್ಲವೇ? ಆಡುವಾಗ ಗಂಭೀರವಾಗಿಲ್ಲದಿದ್ದರೆ, ಏಕಾಗ್ರತೆ ಕಳೆದುಕೊಂಡು ಬಹುಮಾನ ವಂಚಿತರಾಗಬಹುದು. ಸ್ಥಳೀಯ ಕ್ರೀಡೆಗಳು ಮನೆಯ ಒಳಾಂಗಣದಿಂದ ಪ್ರಾರಂಭವಾಗಿ, ಅಂಗಳ ಮುಟ್ಟಿ, ಬಯಲಿಗೆ ಸಾರಿರುವುದು ಮಾನವನ ನಾಗರಿಕತೆಯ ವಿಕಾಸವಾದದಷ್ಟೇ ಇತಿಹಾಸ ಉಳ್ಳದ್ದು. ಶಾಲೆ- ಕಾಲೇಜು ಹಂತಗಳಲ್ಲಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಉನ್ನತ ವ್ಯಾಸಂಗಕ್ಕೆ ವಿಫುಲ ಮೀಸಲಾತಿಯ ಅವಕಾಶಗಳನ್ನು ಸರ್ಕಾರ ಮಾಡಿಕೊಡುತ್ತದೆ. ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲ, ಸರ್ಕಾರಿ ಉದ್ಯೋಗದಲ್ಲೂ ಗೌರವ ಸ್ಥಾನಮಾನಗಳನ್ನು ಕಲ್ಪಿಸಲಾಗುತ್ತದೆ. ಕ್ರೀಡಾ ಸಾಧಕರದ್ದು ವೈಯಕ್ತಿಕ ಸಾಧನೆ, ಅವರಿಗೇಕೆ ಈ ಬಗೆಯ ವಿಶೇಷ ಗೌರವ ಎನ್ನುವವರಿಗೆ, ತಿಳಿ ಹೇಳಬೇಕಾದುದು ಜವಾಬ್ದಾರಿ ಹೊಂದಿರುವ ನಾಗರಿಕರ ಕರ್ತವ್ಯ. ಕೆಲವೊಮ್ಮೆ ಆಟಗಳನ್ನು ಸಾಂಪ್ರದಾಯಿಕ ಎಂದೋ ಹ್ಂದಿನಿಂದ ನಡೆದು ಬಂದ ರೂಢಿ- ಪರಂಪರೆ ಎಂದೋ ಆಡುವುದು ಕಡ್ಡಾಯ. ಕೃಷ್ಣ ಜನ್ಮಾಷ್ಠಮಿಗೆ ಮೊಸರಿನ ಗಡಿಗೆ ಒಡೆಯುವುದು, ಗಾಳಿಪಟ ಬಿಡುವುದು, ಎತ್ತಿನ ಬಂಡಿ ಓಡಿಸುವುದು, ಭಾರದ ಗುಂಡು ಎತ್ತುವುದು, ದಸರಾ ಹಬ್ಬದಲ್ಲಿ ಪೈಲ್ವಾನ್ಗಳಿಂದ ಕುಸ್ತಿ ಕಾಳಗ, ಹುಂಜದ ಅಂಕಣ, ಕೋಳಿ ಜಗಳ, ಹೋರಿ- ಟಗರು ಕಾಳಗ, ಯುಗಾದಿ ಹಬ್ಬದ ಮಾರನೆ ದಿನ ಇಸ್ಪೀಟಾಟ…. ಇವೆಲ್ಲಾ ಒಂದು ಪುರಾಣದ್ದೋ ಇತಿಹಾಸದ್ದೋ ಎಳೆಯನ್ನು ಇಟ್ಟುಕೊಂಡು ನಾಮಕಾವಾಸ್ತೆಗೆ ಇರಲಿ ಎಂದಾದರೂ ಆಡುವಂತಿರುತ್ತವೆ!! ಕ್ರೀಡೆ ಎಂದರೆ ಕೇವಲ ದೈಹಿಕ ಆಟವಲ್ಲ. ಅದು ಮಾನಸ್ಥಿಕ ಸ್ಥಿತಿಯೂ ಕೂಡ. ‘ಕ್ರೀಡಾ ಮನೋಭಾವ’ ಹೊಂದಿರಬೇಕೆಂದರೆ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಎಂದರ್ಥ. ಸೋತ ಕಾರಣಕ್ಕೆ ಹತಾಶರಾಗಿ ಕೈ ಚೆಲ್ಲದೇ, ಮರಳಿ ಯತ್ನವ ಮಾಡುತ್ತಿರಬೇಕೆನ್ನುವ ಸಂಕಲ್ಪ ಶಕ್ತಿಯನ್ನು ಸದಾಕಾಲ ಜಾಗೃತವಾಗಿ ಇಟ್ಟುಕೊಳ್ಳುವುದೇ ಕ್ರೀಡಾ ಮನೋಭಾವ. ಇದು ವೈಯಕ್ತಿಕ ಸ್ವಾಸ್ಥ್ಯದೊಡನೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ. ಒಲಂಪಿಕ್ಸ್, ಕಾಮನ್ವೆಲ್ತ್, ಫಿಫಾ, ಟೆನ್ನಿಸ್ ನ ವಿವಿಧ ಗ್ಯ್ರಾಂಡ್ ಸ್ಲ್ಯಾಮ್ ಗಳು, ಚೆಸ್, ಕ್ರಿಕೆಟ್, ರಗ್ಬಿ, ಕುದುರೆ ಸವಾರಿ, ಅಥ್ಲೆಟಿಕ್ಸ್ ನ ರಾಷ್ಟ್ರೀಯ- ಅಂತಾರಾಷ್ಟ್ರೀಯ ಕ್ರೀಡೆಗಳು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುತ್ತವೆ. ಯಾವುದೋ ದೇಶದ ಕ್ರೀಡಾ ತಾರೆ, ಮತ್ಯಾವುದೋ ದೇಶದ ಗಾಡ್ ಆಫ್ ಅರ್ಥ್ ಆಗುವುದೇ ಒಂದು ಸೋಜಿಗ. ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹುಚ್ಚುತನ ಎನಿಸುತ್ತದೆ. ಕೆಲವೊಂದು ಕ್ರೀಡೆಗಳು ಸಮುದಾಯವನ್ನೇ ಸಮೂಹ ಸನ್ನಿಗೆ ಒಳಪಡಿಸುತ್ತವೆ. ಕ್ರೀಡೆಗಳನ್ನು ಅನುಸರಿಸಿ ಬರುವ ಪ್ರಾಯೋಜಕರು, ಜಾಹೀರಾತುಗಳು ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಸುತ್ತವೆ. ವೇಶ್ಯಾವಾಟಿಕೆಗೆ, ಡ್ರಗ್ಸ್ ದಂಧೆಗೆ, ಮಾನವ ಸಾಗಾಣಿಕೆ, ರಾಜಕೀಯ ಸ್ಥಿತ್ಯಂತರಕ್ಕೆ, ಆಟಗಳೂ ಪ್ರಮುಖ ಕಾರಣ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವೇ… ಸರಿಯಾದ ತರಬೇತಿ, ಅನುಕೂಲಕರ ವ್ಯವಸ್ಥೆ ಒದಗಿಸಿದರೆ ಗ್ರಾಮೀಣ ಪ್ರತಿಭೆಗಳು ಸಾಧನೆ ಯಾವ ಎತ್ತರದಲ್ಲಿರುತ್ತದೆ ಎಂಬುದಕ್ಕೆ ನಮ್ಮ ಮುಂದೆ ಉದಾಹರಣೆಯ ಸಾಲು ಸಾಲು ಮಾದರಿಗಳೇ ಇವೆ. ಆದರೆ, ಲಿಂಗ-ಜಾತಿ- ವರ್ಗ- ವರ್ಣ ತಾರತಮ್ಯಗಳು ಅಂಥ ಸಾವಿರಾರು ಪ್ರತಿಭೆಗಳನ್ನು ಅವಕಾಶವಂಚಿತರನ್ನು ಸೃಷ್ಟಿಸಿರುವುದು ಉಂಟು. ವಶೀಲಿಭಾಜಿ ನಡೆಸಿ, ಕ್ರಿಕೆಟ್, ಅದರಲ್ಲೂ ಪುರುಷರ ಕ್ರಿಕೆಟ್ ಒಂದೇ ನಿಜವಾದ ಆಟವೆಂದು ಪರಿಗಣಿಸುವ ಭಾರತದಂಥ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಎರಡಂಕಿ ಮೇಲೆ ಪದಕ ನಿರೀಕ್ಷಿಸುವುದು ಮೂರ್ಖತನ. ನಾವು ಎಂಜಿನಿಯರ್, ವೈದ್ಯಕೀಯ ಬಿಟ್ಟ ಓದು ಓದಲ್ಲ ಎಂದೂ, ಕ್ರಿಕೆಟ್ ಬಿಟ್ಟ ಇತರೆ ಆಟ ಆಟವಲ್ಲ ಎಂದೂ ಎಂದೋ ಪರಮ ದಡ್ಡತನದ ನಿರ್ಧಾರ ಮಾಡಿಬಿಟ್ಟಿರುವಂತಿದೆ. ಶಾಲಾ ಹಂತದಲ್ಲಿ ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿದ್ದ ಶಿಕ್ಷಣ ವ್ಯವಸ್ಥೆ ಬರಬರುತ್ತಾ, ಓದಿನ ಕಾರ್ಖಾನಗಳಂತೆ ಆಗುತಿರುವುದು ದೈಹಿಕ – ಮಾನಸಿಕ ಹಾಗೂ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯದ ಹದವನ್ನು ಹಾಳುಗೆಡವುತ್ತಿದೆ. ಬೆಕ್ಕಿನ ಕೈಗೆ ಸಿಕ್ಕಿ ಬೀಳುವ ಇಲಿಯನ್ನು ಅದು ಒಂದೇ ಏಟಿಗೆ ಕೊಂದು-ತಿಂದು ಮುಗಿಸುವುದಿಲ್ಲ. ಬಿಟ್ಟ ಹಾಗೆ ಮಾಡಿ, ಮತ್ತೆ ಮೇಲೆ ಹಾರಿ ಅದನ್ನು ಸತಾಯಿಸಿ ಸುಸ್ತು ಮಾಡಿಸಿ ಅದು ಗಾಬರಿ ಬಿದ್ದು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿರುತ್ತದೆ. ಹೀಗೆ, ಒಬ್ಬರ ಆಟ ಮತ್ತೊಬ್ಬರಿಗೆ ಪ್ರಾಣ ಕಂಟಕ ಆಗಬಾರದು ಎಂದೇ ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಎಂಬ ಗಾದೆ ಟಂಕಿಸಲಾಗಿದೆ. ‘ಆಟ ಆಡಿದ್ರೆ ಅರಗಿಣಿ; ಕಾಟ ಕೊಟ್ರೆ ನಾಗಪ್ಪ’ ಅಂತಾನೂ ಮನೋಆಟದ ಕುರಿತ ಗಾದೆ ಇದೆ. ಇದು ಮಾನವರ ನಡವಳಿಕೆಯು ಹೇಗೆ ಪ್ರಾಣಿಗಳ ನಡವಳಿಕೆಗೆ ಹೋಲಿಕೆಯಾಗುವುದು ಎಂಬ ಬಗ್ಗೆ ಇರುವಂತಹದ್ದು. ಹಿಂದಿನ ರಾಜಮಹಾರಾಜರು, ಹಣವಂತರು ಶಿಕಾರಿಯನ್ನೂ ಆಟವೆಂದೇ ಭಾವಿಸಿದ್ದರೆನ್ನುವುದು ಓದಿನಿಂದ ತಿಳಿಯಬಹುದು. ಈಗ ಕಾನೂನು ಶಿಕಾರಿಯನ್ನು ಅಮಾನ್ಯ ಮಾಡಿದೆ. ಸರ್ಕಸ್ ನಲ್ಲಿ ಹಿಡಿದು ಪಳಗಿಸಿದ ಕಾಡುಪ್ರಾಣಿಗಳಿಂದ ಕೆಲವಾರು ಆಟ ಆಡಿಸಿ ಕಾಸು ಮಾಡುವುದು ಈ ಮನುಷ್ಯ ಜಾತಿಯವರ ಆಸೆಬುರಕತನವೋ ಅಥವಾ ಚಾಣಾಕ್ಷತನವೋ ನಿರ್ಧರಿಸುವುದು ಹೇಗೆ? ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು’ ಎನ್ನುವ ಆಸ್ತಿಕವಾದಿಗಳು, ತಮ್ಮ ನಿರ್ಧಾರಗಳಿಗೂ ಬೇರೆಯ ಧಾತುವನ್ನು ಹೊಣೆಗಾರಿಕೆ ಮಾಡುವುದು ಬೇಜವಾಬ್ದಾರಿತನ ಅವಲ್ಲದೆ ಮತ್ತೇನಲ್ಲ ಎಂದು ಖಂಡಿತವಾಗಿ ಹೇಳಬಹುದು. ಒಟ್ನಲ್ಲಿ ‘ಆಟ ಕೆಟ್ಟರೆ ದೀವಟಿಗೆಯವನ ಸುತ್ತ’ ಎಂದಂತೆ, ಜೀವನದ ಆಟದಲ್ಲಿ ಭಾಗವಹಿಸಿರುವ ಎಲ್ಲರೂ ಒಂದಲ್ಲಾ ಒಂದು ಪಾತ್ರ ನಿರ್ವಹಿಸವೇ ಬೇಕು. ಹಾಗೂ ‘…. ನಿಂತಾಗ ಬುಗುರಿಯ ಆಟ ಎಲ್ಲಾರೂ ಒಂದೇ ಓಟ…’ ಎಂದು ಆಟ ಮುಗಿಸಿ ‘ಸಾಯೋ ಆಟ’ ಆಡಲು ಗಂಟುಮೂಟೆ ಕಟ್ಟಲೇಬೇಕು… ******************** – ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಕಾವ್ಯಯಾನ ಅರಿತು ಮರೆತು ಲಕ್ಷ್ಮೀ ಮಾನಸ ನೆರಳ ಬೆಳಕಿನಕದನದಲ್ಲಿ,ಪ್ರತಿಬಿಂಬ ಅರಿಯದದರ್ಪಣವನ್ನು,ನೆರಳು ಎಂದೋ ತೊರೆದರೂ, ಬೆಳಕ ಗೈರುಹಾಜರಿಯಲ್ಲಿ,ಮೋಡ ಕವಿದಬಣ್ಣದ ಬಿಂಬವುಮರುಭೂಮಿಯಲ್ಲಿ ನೀರನ್ನರಸಿಹಾಕುವ ಹೆಜ್ಜೆಗಳುಎದೆಗೂಡಲ್ಲಿ ಪಿಸುಗುಟ್ಟುತ್ತಲಿವೆ..ಕಣ್ರೆಪ್ಪೆಯ ಶಬ್ಬಕ್ಕೆಎದುರುನಿಲ್ಲಲಾಗದೆ….. ಭಾವನೆಯ ಬಳ್ಳಿಯಲ್ಲಿಮುದುಡದ ಕುಸುಮಾಗಳಿಗೆಕಪ್ಪು ವರ್ಣವ ಪೂಸಿದರೂ, ಅರಿತು ಮರೆತು,ಗೀಚಿದ ಗೆರೆಯ ದಾಟಿ,ಕಾರ್ಮೋಡದ ಮಡಿಲಲ್ಲಿನಸುಖ ನಿದ್ರೆಯ ತೊರೆದು, ಬಯಸುತಲಿವೆಮಾತನರಿಯದ ಮೌನವಗೀತೆಯಾಗಿ ಬದಲಿಸಿ,ವಸಂತ ಕೋಗಿಲೆಯೊಡಗೂಡಿಮರೆತ ಹಾಡನ್ನುಮರಳಿ ಹಾಡಲು,ಅರಿತ ರಾಗದಲ್ಲಿಚಿರನಿದ್ರೆಗೆ ಜಾರಲು… ******
ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು ನೊಂದ ಎದೆಗೆ ಸಾಂತ್ವನ ನೀಡ ದುದಕ್ಕೆ ವಿಷಾದವಿದೆ
ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ
ಕಾವ್ಯಯಾನ ಸೀರೆಯ ಸೆರಗು ಶಿವಲೀಲಾ ಹುಣಸಗಿ ಸೀರೆಗೊಂದು ಸೆರಗು ಮನಸಿಗೆ ಮೆರಗುಅತ್ತು ಕರೆವಾಗ ಕಣ್ಣೊರೆಸುವ ಸಾಧನವುಕಂಬನಿಯು ಮುತ್ತಾಗಿ ಅರಳಿದ ಸೊಬಗುಆಟಪಾಟಕೆ ಬೆವೆತ ಮೈಮನಕೆ ಬೆರಗುಬೀಸಕೆಯಾಗಿ ಕೈಯಂಚಲಿಹುದು ಸೆರಗುಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!ಅಡಿಗೆಮನೆಯ ಸಿದಾಸಾದಾ ಮಸಿಅರಿವೆತಲೆನೆಂದು ಬಂದವಗೆ ಟವಾಲ್ ಯಿದುನೇಸರನ ತಾಪಕೆ ಕೊಡೆಯಂತೆ ಅರಳಿಹುದುನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದುಹೊಸಬರೆದುರು ಅಸ್ತ್ರದಂತೆ ಈ ಸೆರಗುಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದುಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದುತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದುತಲಿಮ್ಯಾಲೆ ಗೌರವದ ಕಿರೀಟದಂತಿಹುದುಅಮ್ಮನ ಸೆರಗಿನ ಅಂಚಿಡಿದು ಹೊಂಟರೆವಿಶ್ವಪರ್ಯಟನವಾದಂತೆಯೇ..ಸರಿ!ಸೆರಗೊಂದು ಮಾಂತ್ರಿಕ ದಂಡದಂತೆಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದಸಿಟ್ಟಿಗೆದ್ದು ಸೊಂಟಕೆ ಸೆರಗ ಕಟ್ಟಿದಳೆಂದರೆಎದುರಿಗಿದ್ದವರು ನಾಪತ್ತೆಯಾದಂತೆಪ್ರೀತಿಯಲಿ ಸೆರಗೊಡ್ಡಿ ಬೇಡಿದಳೆಂದರೆಕಲ್ಲುಕರಗಿ ಹೂವಾಗುವುದೆಲ್ಲ..ಸೆರಗಿನಲ್ಲಿಹುದು ಪ್ರೇಮಾಮೃತವಿಲ್ಲಿ.ಹೆಣ್ಣಿಗೊಂದು ಅಂದ ತರುವುದು ಸೀರೆಸೀರೆಗೊಂದು ಸೆರಗೆ ಜೀವಾಮೃತವಿಲ್ಲಿ *************
ವಿ.ಜೇ. ನಾಯಕ ಅವರ ತರುವಾಯ ಜಿಲ್ಲಾ ಘಟಕದ ಅಧ್ಯಕ್ಷಗಾದಿಯೇರಿದ ಟಿ.ಕೇ.ಮಹಮೂದ ಎಂಬ ಹಿರಿಯರು ಇಪ್ಪತ್ತೊಂದು ವರ್ಷಗಳ ಕಾಲ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ಜಿಲ್ಲಾಧ್ಯಕ್ಷರಾಗಲೀ, ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಹಿರಿಯರಾಗಲೀ, ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಾಗಲೀ, ಘಟಕವನ್ನು ಕ್ರಿಯಾಶೀಲ ಚಟುವಟಿಕೆಗಳಿಂದ ಮುನ್ನಡೆಸುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.
ಅನುವಾದಿತ ಕವಿತೆ ನೀನಿನ್ನೂ ಅಪರಿಚಿತನೇನು….? ಇಂಗ್ಲೀಷ್ ಮೂಲ-ವಿಜಯಲಕ್ಷ್ಮೀ ಪುಟ್ಟಿ ಕನ್ನಡಕ್ಕೆ-ಸಮತಾ ಆರ್. ನೀನಿನ್ನೂ ಅಪರಿಚಿತನೇನು….? ಇತ್ತೀಚೆಗೆ ಯಾಕೋನೀ ಅಪರಿಚಿತ ಅನಿಸತೊಡಗಿಮತ್ತಿನ್ನೊಮ್ಮೆ ನಂಟು ಬೆಳೆಸಲು ಯತ್ನಿಸಿದರೂಎದೆಯಲ್ಲಿ ಏನೋಪ್ರಶ್ನೆಯೊಂದುತಡಕುತಿದೆಏನಾಯಿತು?ಯಾಕೀ ಕೋಪ?ನನ್ನ ತಪ್ಪೇನು?ಎದುರಾದಾಗ ಹೇಗೆ ದಿಟ್ಟಿಸಲಿ ನಿನ್ನ ಕಣ್ಣ ? ಆದರೂ ಹೊಸ ಭರವಸೆ,ಹೊಸ ಪಯಣ,ಹೊಸ ಪ್ರಮಾಣ ಕಾಯುತಿರುವೆಹೃದಯತುಂಬಿ ನಾ..ಯಾರದೋ ಆಗಮನಅರಿಯದ ತಳಮಳ ಗಲಿಬಿಲಿ ಸುಗಂಧವೊಂದು ಗಾಳಿಯಲಿ ತೇಲಿದಂತೆ ನಿನ್ನ ಸಾವಿರಾರು ನೆನಪುಗಳು. ಇಂದೇನಿದು ನನ್ನಲ್ಲಿ,ಯಾವತ್ತೂ ನಾನರಿಯದ ಈ ಚಡಪಡಿಕೆ.ಹಿಂದೆಂದೂ ಇರದಿದ್ದ ಮನೋಕಾಮನೆ.ಕಾತುರದ ಕಂಗಳು ಹುಡುಕುತ್ತಿವೆ ನಿನ್ನನ್ನೇ.ಎನ್ನ ಜೀವನದ ಹೊತ್ತಿಗೆಯ ಚಿತ್ರಪಟವಾದಅವನಿಗಾಗಿ ಮಾತ್ರ ಈ ಭಾವನೆ. ನನಗಾಗಿಯೇ,ನನ್ನ ಸಹಚರ್ಯಕ್ಕಾಗಿಯೇಸ್ವರ್ಗದಿಂದಿಳಿದು ಬಂದಂತಹ ಜಾಣ್ಮೆಯ ಮೂರ್ತಿ.ಈ ರಾಗ ರಂಗಿನಲಿ,ನನ್ನೆಡೆಗೆ ಬೀರುವ ಕಡೆಗಣ್ಣ ನೋಟಮಂಜುಗಟ್ಟಿದ ನನ್ನ ತುಟಿಗಳಲ್ಲಿನುಡಿಯದ ಭಾವಗಳು ನೂರುನನ್ನೆದೆಯ ಮಿಡಿತ ತಪ್ಪಿಸಿತೇ ನಿನಗಾಗಿ ಪದವೊಂದ..ಹುಡುಕುತ್ತಿರುವೆಇನ್ನೂ ಹುಡುಕುತ್ತಲೇ ಇರುವೆ.. *************** Are you still a stranger.. Feeling Unacquainted as strangersTrying to build a bond againBut there’s a question lingers in my heart..What happenedWhy this wrath?what’s my folly?How should I face you after we meet? But Waiting for new hopes, new joynew promises,A strange fragrance fills the airWith the coming of some oneFor whom I waited with all my heart What is this restlessnessI feel todayNever was I in this state of mind before..Eyes eagerly searching for youThis feeling is for him aloneThe one I picturedIn the book of my life.. Like an icon of intelligenceDescended from heavenHas come only for me to favor me to assist me.. In this splendorStealing furtive glances at meCausedUnspoken words upon my frozen lipsDid my heart miss a word for you..Searching..Still searching..
ನೀನಿನ್ನೂ ಅಪರಿಚಿತನೇನು….? Read Post »
ಕಥೆ ನಿರಾಕರಣ ಎಸ್.ನಾಗಶ್ರೀ ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು ಬಳೆ ಧರಿಸಿದ ರಾಮಕ್ಕನವರ ಪ್ರಭೆ ಇದ್ದ ಹಾಗೇ ಇತ್ತು. ಐವತ್ತನೆಯ ವಯಸ್ಸಿನಲ್ಲಿ ಗಂಡ ತೀರಿಕೊಂಡಾಗ ಬೆಳೆದ ಮಕ್ಕಳಿದ್ದರು. ಹೆಣ್ಣುಮಕ್ಕಳ ಮದುವೆಯಾಗಿತ್ತು. ಮೂರು ಗಂಡುಮಕ್ಕಳಿಗೆ ಮುತುವರ್ಜಿಯಿಂದ ಒಳ್ಳೆ ಕಡೆ ಹೆಣ್ಣು ತಂದು ಮದುವೆ ಮಾಡಿ, ಮೊಮ್ಮಕ್ಕಳನ್ನು ಲಾಲಿಸಿ, ಹೆಮ್ಮೆಯಿಂದ ಹರಸುವುದರಲ್ಲಿ ಕಾಲ ಮುಂದಕ್ಕೆ ಓಡಿದ್ದು ಸುಳ್ಳೆನಿಸುತ್ತಿತ್ತು. ತನಗಿಂತ ಇಪ್ಪತ್ತು ವರ್ಷ ಹಿರಿಯನಾದ ಹುಡುಗನಿಗೆ ಮೂರನೆ ಹೆಂಡತಿಯಾಗಿ ರಮಾ ಮದುವೆಯಾಗಿ ಬಂದಾಗ, ಮನೆ ತುಂಬಾ ಅತ್ತೆ, ಮಾವ, ಓರಗಿತ್ತಿ, ಭಾವಂದಿರು, ಮೈದುನರು ಮತ್ತು ಅವರ ಮಕ್ಕಳು. ಇವರಿಗೆ ಮದುವೆಯಾಗಿ ಬಂದ ಹೆಂಡಿರಿಬ್ಬರೂ ಚೊಚ್ಚಲ ಹೆರಿಗೆಯಲ್ಲಿ ತೀರಿಕೊಂಡಿದ್ದರು. ತಾಯಿ ದಿಕ್ಕಿಲ್ಲದ ಮನೆಯ ಹಿರಿ ಹುಡುಗಿ ಅಂತ ಮಾವನವರು ಸ್ವಲ್ಪ ಹೆಚ್ಚೇ ಪ್ರೀತಿ ತೋರಿಸುತ್ತಿದ್ದರು. ಗಂಡನಿಗೆ ಹದಿನಾಲ್ಕರ ಎಳೆ ಹುಡುಗಿ ತನ್ನನ್ನು ನಂಬಿ ಬಂದಿದ್ದಾಳಲ್ಲ ಎಂಬ ಕನಿಕರ. ದುಡ್ಡಿಗೆ ಬಡತನವಿಲ್ಲದ ಮನೆ. ರೂಪವತಿ ಹೆಂಡತಿ. ಹೆಂಡತಿಗೆ ಇಷ್ಟವಾಗಬಹುದೆಂದು ತರತರದ ಸೀರೆ, ಕುಪ್ಪುಸದ ಬಟ್ಟೆ ತಂದು ತಂದು ಹಾಕುತ್ತಿದ್ದರು. ಮೈಮೇಲೆ ಒಂದು ಜೊತೆ , ದಂಡದ ಮೇಲೆ ಒಂದು ಜೊತೆ ಎಂದು ಎಣಿಸಿದಂತೆ ಬಟ್ಟೆಯಿದ್ದ ಅಮ್ಮನ ಮನೆಗಿಂತ ಈ ಮನೆ ಖುಷಿ ಕೊಡುತ್ತಿತ್ತು. ಅದೇ ಖುಷಿಯಲ್ಲೇ ಹದಿನಾರನೇ ವಯಸ್ಸಿನಲ್ಲಿ ಚೊಚ್ಚಲ ಬಸುರಿಯೆಂದು ತಿಳಿದಾಗ, ಅಪ್ಪನಿಗೆ ಆನಂದ. ಅತ್ತೆ ಮನೆಯಲ್ಲಿ ಆತಂಕ. ಪ್ರತಿದಿನ ಪೂಜೆ, ಹರಕೆಗಳ ಬಾಬತ್ತು. ಬಹಳ ಮುಗ್ಧ ಮನಸ್ಸಿನ ರಮಾಗೆ ಆನಂದ, ಆತಂಕಗಳಾವುದೂ ಅಷ್ಟಾಗಿ ತಟ್ಟದಿದ್ದರೂ, ಒಂದೊಮ್ಮೆ ತಾನೂ ಹೆರಿಗೆಯಲ್ಲಿ ಸತ್ತರೆ ಎಂಬ ಭಯ ಆಗಾಗ ಆವರಿಸುತ್ತಿತ್ತು. ಆದರೆ ಜೋತಿಷಿಯಾದ ಅಪ್ಪನೇ ಹೇಳುತ್ತಿದ್ದಂತೆ ದೀರ್ಘಾಯುಷ್ಯ ದ ಜಾತಕ ನನ್ನದು ಎಂಬ ಧೈರ್ಯ ಸಾಂತ್ವನ ನೀಡುತ್ತಿತ್ತು. ಅಂತೂ ಹೆರಿಗೆ ಸುಸೂತ್ರವಾಗಿ ಮಗು ಬಾಣಂತಿ ಮನೆಗೆ ಬಂದಾಗ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು. ಬಹಳ ಮುದ್ದಿನಿಂದ ಮಗಳಿಗೆ ‘ಆನಂದಿ’ ಎಂದು ಕರೆದರು. ಹಿರಿಮಗಳಾದ್ದರಿಂದ ತಮ್ಮ, ತಂಗಿಯರ ಜವಾಬ್ದಾರಿಯೂ ಹೆಗಲೇರಿ ರಮಾ , ಎಲ್ಲರ ಬಾಯಲ್ಲೂ ರಮಕ್ಕ, ರಮಕ್ಕ ಅಂತ ಕರೆಸಿಕೊಳ್ತಾ ಕಡೆಗೆ ನಾಲಿಗೆ ಹೊರಳಿದಂತೆ ರಾಮಕ್ಕನಾದಳು. ರಮಾದೇವಿಯೆಂಬ ಹೆಸರು ಹದಿನಾರನೇ ವಯಸ್ಸಿಗೇ ಕಳಚಿಕೊಂಡಿತು. ಗಂಡ ಮಾತ್ರ ಆಗಾಗ ದೇವಿ…ದೇವಿ…ಎಂದುಸುರುತ್ತಾ ಹತ್ತಿರವಾದ ಕ್ಷಣಗಳು ಆಗೀಗ ನೆನಪಾಗಿ ಕಣ್ತುಂಬುವುದು.ತುಂಬಿದ ಸಂಸಾರದ ಕಟ್ಟುಪಾಡು, ತವರಿಗೆ ಆಸರೆಯಾಗಬೇಕಾದ ಅನಿವಾರ್ಯ, ತನ್ನ ಆರು ಮಕ್ಕಳ ಜವಾಬ್ದಾರಿ, ವಯಸ್ಸಿನಲ್ಲಿ ತುಂಬಾ ಹಿರಿಯನೆನನ್ನಿಸುವ ಗಂಡ ಇವುಗಳಲ್ಲಿ ಮುಳುಗೇಳುತ್ತಾ ರಾಮಕ್ಕ ವಯಸ್ಸಿಗೆ ಮೀರಿದ ಪ್ರಬುದ್ಧತೆ ಸಂಪಾದಿಸಿಕೊಂಡಿದ್ದಳು. ತೆರೆದ ಕಣ್ಣು, ಕಿವಿಗಳಿಂದ ಜಗತ್ತನ್ನು ನೋಡುತ್ತಲಿದ್ದರೆ ಸಾಕು. ಯಾವ ವಿದ್ಯಾಭ್ಯಾಸವೂ ನೀಡದಷ್ಟು ವಿವೇಕವನ್ನು ಜಗತ್ತು ಕಲಿಸುತ್ತದೆಂದು ನಂಬಿದ್ದಳು. ಅದರಂತೆಯೇ ರಕ್ತಗತವಾಗಿದ್ದ ಧೈರ್ಯ, ಏನಾದರೂ ಸಾಧಿಸಿಬಿಡುವ ಛಾತಿಯಿಂದಲೂ ಮನೆಯಲ್ಲಿ ಗೌರವ, ಪ್ರತ್ಯೇಕ ಸ್ಥಾನವನ್ನು ಗಳಿಸಿದ್ದ ಆಕೆಯ ಮಾತಿಗೆ ಎದುರಾಡುವರೇ ಇರಲಿಲ್ಲ. ಈಗಲೂ ಒಂದು ಬೀರು ಭರ್ತಿಯಿದ್ದ ಕಂಚಿ, ಬನಾರಸಿ, ಇಳಕಲ್, ಮೊಳಕಾಲ್ಮೂರು, ಮೈಸೂರ್ ಸಿಲ್ಕ್ ಸೀರೆಗಳನ್ನು ಎಲ್ಲರಿಗೂ ಹಂಚುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸಲಾಗಲಿಲ್ಲ. ಎಪ್ಪತ್ತು ಎಂಭತ್ತು ಸೀರೆಗಳು ಒಂದೊಂದೂ ಐದಾರು ಸಾವಿರಕ್ಕೆ ಕಮ್ಮಿ ಹೇಗಾದೀತು? ಅದರಲ್ಲೂ ಹಳೆ ಸೀರೆಗಳ ಅಂಚಿನಲ್ಲಿ ಬೆಳ್ಳಿ, ಬಂಗಾರವಿರದೆ ಇರುತ್ತದೆಯೇ? ಮನುಷ್ಯನಿಗೆ ಎಷ್ಟು ಆಸ್ತಿಪಾಸ್ತಿಯಿದ್ದರೂ ಹೆತ್ತವರ ಸ್ವತ್ತು ಪರರ ಪಾಲಾಗುವುದನ್ನು ನೋಡಿ ಸಹಿಸಲು ಸಾಧ್ಯವೇ? ರಾಮಕ್ಕನವರ ಈ ದಿಢೀರ್ ಬದಲಾವಣೆ ಅಷ್ಟು ಸುಲಭಕ್ಕೆ ಯಾರಿಗೂ ನಿಲುಕಲಿಲ್ಲ. ನಿನ್ನೆ ಮೊನ್ನೆಯವರೆಗೂ ಕುಟುಂಬದ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕಡೆಗೆ ಒಂದು ಹೋಟೆಲ್ಗೆ ಹೋಗುವಾಗಲೂ ರೇಷ್ಮೆ ಸೀರೆ, ಅದಕ್ಕೊಪ್ಪುವ ರವಿಕೆ, ಎರಡೆಳೆ ಚಿನ್ನದ ಸರದ ಜೊತೆಗೆ ಮುತ್ತಿನ ಸರ, ಅಥವಾ ಹವಳದ ಸರ ತೊಟ್ಟು ಒಂದು ಬಗೆಯ ಗಾಂಭೀರ್ಯದಿಂದ ನಡೆದು ಬರುತ್ತಿದ್ದ ತಮ್ಮ ತಾಯಿ ಈಗ ಸಾದಾ ಸೀರೆ ಬಿಟ್ಟು ಮತ್ಯಾವುದೂ ಬೇಡವೆಂದಿದ್ದು ಗುಲ್ಲಾಗಿತ್ತು. ಮೂವರು ಸೊಸೆಯರು ತಮ್ಮಲ್ಲೂ ಸೀರೆಗಳ ರಾಶಿ ಹೊಂದಿದ್ದರೂ, ಅವರು ತಮ್ಮ ಮಕ್ಕಳ ಚೌಲ, ಉಪನಯನ, ಮದುವೆ, ಗೃಹಪ್ರವೇಶ ಇತ್ಯಾದಿಗಳಲ್ಲಿ ಪಾದಪೂಜೆಗೆಂದು ನಾಲ್ಕಾರು ಅಂಗಡಿ ಸುತ್ತಿ, ಸಾವಿರಾರು ರುಪಾಯಿ ಖರ್ಚು ಮಾಡಿ ತಂದ ಸೀರೆಗಳನ್ನು ಬೇಕೆಂದವರಿಗೆ ಕೊಟ್ಟುಬಿಡುತ್ತಿರುವುದು ಸರಿ ಕಂಡಿರಲಿಲ್ಲ. ಇನ್ನು ಕೆಲವು ಸೀರೆಗಳು ಕೊಡುವುದಾದರೆ ತಮಗೇ ಕೊಡಲಿ ಎನ್ನಿಸುವಷ್ಟು ಚೆಂದಿದ್ದವು. ಗಿಣಿಹಸುರಿಗೆ ಗಾಢನೀಲಿ ಅಂಚಿದ್ದ ಕಂಚಿ ಸೀರೆ, ನೇರಳೆ ಬಣ್ಣದ ಬನಾರಸಿ ಸೀರೆ, ಹತ್ತಾರು ಬಣ್ಣದ ಮೈಸೂರ್ ಸಿಲ್ಕ್ ಗಳ ಮೇಲೆ ಆಸೆಯಿಟ್ಟುಕೊಂಡಿದ್ದ ಸೊಸೆಯರು ಆಡಲೂ ಆಗದೆ , ಸುಮ್ಮನಿರಲೂ ಆಗದೆ ತಳಮಳಿಸುವಾಗಲೇ ರಾಮಕ್ಕನವರು ಸೊಸೆಯರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದು ಶನಿವಾರ ತಾವಿರುವಲ್ಲಿಗೆ ಬನ್ನಿರೆಂದು ಕರೆದರು. ಏನಿದ್ದರೂ ಫೋನಿನಲ್ಲಿ ವಾರಕ್ಕೊಂದೆರಡು ಸಲ ತಮ್ಮತಮ್ಮಲ್ಲೇ ಮಾತಾಡಿಕೊಂಡಿರುತ್ತಿದ್ದ ಸೊಸೆಯರು, ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಆರುತಿಂಗಳ ಮೇಲೇ ಆಗಿತ್ತು. ಆನಂದಿ ತೀರಿಕೊಂಡಾಗ ತಿಥಿ, ವೈಕುಂಠ ಅಂತ ಹೋದ ಹದಿನೈದು ದಿನಗಳೊಳಗೆ ಜೊತೆಯಾಗಿ ಹೋಗಿ ಬಂದಿದ್ದಷ್ಟೇ. ಆಮೇಲೆ ಸಿಗುವ ಸಂದರ್ಭ ಒದಗಿಬರಲಿಲ್ಲ. ಮಾತು ಹೇಗೆ ತಿರುಗಿದರೂ ಆನಂದಿಯ ವಿಷಯಕ್ಕೇ ಬಂದು ನಿಂತು ನಿರ್ವಾತ ಕವಿಯುತ್ತಿತ್ತು. ಆ ಮುಜುಗರದಿಂದ ಪಾರಾಗಲೋ ಎಂಬಂತೆ ಮೇಲೆಮೇಲೆ ಕುಶಲ ಸಂಭಾಷಣೆ ನಡೆಸಿ ಫೋನಿಟ್ಟುಬಿಡುವ ದಾರಿ ಹಿತವಾಗಿತ್ತು. ಈಗ ಶುರುವಾದ ಸೀರೆ ವಿವಾದ ಮತ್ತು ರಾಮಕ್ಕನ ಕರೆ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ಕೂಡ ಒಳಿತೇ ಆಯಿತು. ರಾಮಕ್ಕರ ಆರು ಮಕ್ಕಳ ಪೈಕಿ ಆನಂದಿಯೇ ವಿಭಿನ್ನ. ಮೌನಿ. ಧಾರಾಳಿ. ಆದರೆ ಸದಾ ಕೊರಗನ್ನು ಹಚ್ಚಿಕೊಂಡೇ ಬಾಳಿದ ಹೆಣ್ಣು. ಒಳ್ಳೆಯ ಗಂಡ, ಮುದ್ದಾದ ಮಕ್ಕಳು, ಸ್ವಂತ ಮನೆ, ಸ್ವಾತಂತ್ರ್ಯ ಎಲ್ಲ ಇದ್ದೂ ತಾನು ಕನಸಿದ್ದ ಬಾಳು ಇದಲ್ಲ ಎಂದು ನಿರಾಕರಣೆಯಲ್ಲೇ ದಿನದೂಡಿದಳು. ಅಮ್ಮನೊಂದಿಗೆ ಆಡಿದ ಕೆಲವೇ ಮಾತುಗಳಲ್ಲೂ ಅತೃಪ್ತಿಯ ಅಂಶಗಳಿದ್ದವೇ ಹೊರತು ಜೀವನಪ್ರೀತಿಯಲ್ಲ. ಆನಂದಿಯ ಮುಖದಲ್ಲಿ ನಗುವನ್ನು ಮೂಡಿಸಲು ರಾಮಕ್ಕ ಪಟ್ಟಪಾಡು ಒಂದೆರಡಲ್ಲ. ಅವಳಿಗಿಷ್ಟದ ತಿಂಡಿ, ಬಟ್ಟೆ, ಪ್ರವಾಸ, ನೆಮ್ಮದಿ ತರಬಹುದಾದ ಮಾತು, ಸಂಗೀತ, ಬೆಚ್ಚನೆ ತವರು ಎಲ್ಲವನ್ನೂ ಪ್ರಯತ್ನಿಸಿ ಕಡೆಗೆ ಮಾನಸಿಕ ವೈದ್ಯರ ಹತ್ತಿರವೂ ತೋರಿಸಿ , ಚಿಕಿತ್ಸೆಯಾಯಿತು. ಔಷಧಿಯ ಪ್ರಭಾವದಿಂದ ಸ್ವಲ್ಪ ಚೇತರಿಕೆ ಕಂಡಂತಾದರೂ ಮತ್ತೆ ಯಥಾಸ್ಥಿತಿಗೆ ಮರಳುತ್ತಿದ್ದ ಮಗಳು ಜೀವನದ ಸವಾಲಾಗಿದ್ದಳು.ಅವಳಿಗೆಂದು ಆಸೆಯಿಂದ ಕೊಂಡುಹೋದ ತಿಂಡಿ, ಹಣ್ಣು, ಬಟ್ಟೆ, ಒಡವೆ ಯಾವುದನ್ನೂ ಆಕೆ ತನಗಾಗಿ ಉಳಿಸಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವನ್ನೂ ಹಂಚಿ, ತಾನು ಮಾತ್ರ ಹಿಡಿಯನ್ನ, ನಾಲ್ಕಾರು ಸಾದಾ ಸೀರೆ, ಮಂಕಾದ ರವಿಕೆಯಲ್ಲೇ ಜೀವನ ಸವೆಸಿಬಿಟ್ಟಳು. ಏಕೆಂದು ಘಟ್ಟಿಸಿ ಕೇಳುವಂತಿಲ್ಲ. ನನಗೇನು ರೂಪ, ವಿದ್ಯೆ, ಅಧಿಕಾರ ಇದೆಯೇ? ನಿನ್ನಂತೆ ಮೆರೆಯಲು… ಕೊಟ್ಟ ಮೇಲೆ ಅದು ನನ್ನದೆನ್ನುವ ಹಾಗಿದ್ರೆ ಕೊಡು. ಇಲ್ಲದಿದ್ದರೆ ತರುವ ಉಸಾಬರಿಯೇ ನಿನಗೆ ಬೇಡವೆನ್ನುತ್ತಿದ್ದಳು. ಸಮಾರಂಭಗಳಲ್ಲಿ ಉಳಿದವರೆಲ್ಲಾ ಮಿಂಚುತ್ತಿದ್ದರೆ, ತಾನೊಂದು ಮೂಲೆಯಲ್ಲಿ ಇವರಾರಿಗೂ ಸಂಬಂಧಿಸಿಯೇ ಇಲ್ಲವೆಂಬ ನಿರ್ಲಿಪ್ತ ಭಾವದಲ್ಲಿ ಕುಳಿತಿರುತ್ತಿದ್ದಳು. ನಾನು ಹಳೆಸೀರೆಯುಟ್ಟು ಬರುವುದು ನಿಮಗೆ ಇರುಸುಮುರುಸಾದೀತೆಂದು ಜನ ಸೇರುವಲ್ಲಿಗೆ ಬರುವುದನ್ನೇ ಬಿಟ್ಟಳು. ಒಂಟಿಯಾಗಿರುತ್ತ ಅದೇನನ್ನು ಧೇನಿಸುತ್ತಿದ್ದಳೋ? ಮಗಳೇ ಆದರೂ ರಾಮಕ್ಕನಿಗೆ ಅವಳ ಅಂತರಂಗವನ್ನು ಅರಿಯುವುದು ಅಸಾಧ್ಯ. ಉಳಿದೈದು ಮಕ್ಕಳಿಗೆ ಸೇರಿ ತೋರುವ ಕಾಳಜಿಗಿಂತ ಎರಡು ಪಟ್ಟು ಹೆಚ್ಚೇ ಕಾಳಜಿ ತೋರಿದರೂ, ಆನಂದಿಗೆ ಪ್ರಸನ್ನತೆಯಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಸ್ತಂಭನವುಂಟಾಗಿ ತೀರಿಕೊಂಡ ಆಕೆಯ ಸಾವು ರಾಮಕ್ಕನನ್ನು ಬಲವಾಗಿ ತಟ್ಟಿತ್ತು. ಐವತ್ತೊಂಭತ್ತು ಸಾಯುವ ವಯಸ್ಸೇ? ಎಪ್ಪತ್ತೈದರ ತನಗೇ ಈ ಬದುಕಿನ ಸವಿಯನ್ನು ಇನ್ನಷ್ಟು ಸವಿಯಬೇಕೆನ್ನಿಸುವಾಗ ನಿರಾಕರಣೆಯಲ್ಲೇ ಬದುಕು ದೂಡಿದ ಆಕೆ ಅನುಭವಿಸಿದ್ದಾದರೂ ಏನನ್ನು? ಬದುಕಿನ ಹಂಬಲ ಅಪರೂಪವೇ? ತನ್ನನ್ನು ಈ ಬದುಕಿಗೆ ಕಟ್ಟಿಹಾಕಿರುವುದಾದರೂ ಏನು? ವಯಸ್ಸಾದಂತೆ ಮೋಹ ಕಳಚಿಕೊಳ್ಳಬೇಕೆನ್ನುತ್ತಾರೆ. ತನಗೇಕೆ ವೈರಾಗ್ಯ ಸೋಕಿಲ್ಲ? ಹೀಗೆ ನೂರಾರು ಪ್ರಶ್ನೆಗಳು ತಲೆತಿನ್ನುತ್ತಿತ್ತು. ಇದುವರೆಗೂ ಕೂಡಿಟ್ಟುಕೊಳ್ಳುವುದರಲ್ಲಿ, ಉಂಡುಟ್ಟು ಸಂಭ್ರಮಿಸುವುದರಲ್ಲಿ ಕಳೆದ ಕಾಲದ ಬಗ್ಗೆ ವಿಷಾದವಿಟ್ಟುಕೊಳ್ಳದೆ, ಮುಂದೆ ಸರಳವಾಗುತ್ತಾ ಸಾಗಲು ಪ್ರಯತ್ನಿಸಬೇಕೆನ್ನಿಸಿತು. ಆನಂದಿಯ ಸಾವು , ತನ್ನ ಮೊದಲ ಕರುಳಕೂಸಿನ ಅಗಲುವಿಕೆ ತನ್ನ ಬದುಕಿನ ಮತ್ತೊಂದು ತಿರುವು. ಉದಾರವಾಗಿ ಕೊಡುವುದರಲ್ಲಿ ತೃಪ್ತಿಯನ್ನು ಕಂಡಿದ್ದ, ಮೌನವಾಗಿ ಕಾರ್ಯ ಸಾಧಿಸುತ್ತಿದ್ದ ಮಗಳು ಬದುಕಿನ ಸವಾಲಾಗಿರಲಿಲ್ಲ. ಗುರುವಾಗಿದ್ದಳೆನ್ನಿಸಿ ಗಂಟಲುಬ್ಬಿ ಬಂದಿತು. ಅವಳಿದ್ದಷ್ಟು ದಿನವೂ ಅವಳಿಗೆ ಹೊರಗಿನಿಂದ ನೆಮ್ಮದಿಯನ್ನು ಹುಡುಕಿಕೊಡುವ ಸಕಲ ಸಾಹಸಗಳನ್ನು ಮಾಡಿದೆನೇ ಹೊರತು, ಅವಳಾಗಿಯೇ ಬದುಕನ್ನು ಅರ್ಥೈಸಿಕೊಳ್ಳಲು ಬಿಡಲೇ ಇಲ್ಲವೆನಿಸಿತು. ಅಥವಾ ಅವಳು ಕಂಡುಕೊಂಡಿದ್ದ ಅರ್ಥವನ್ನು ತನಗೆ ದಾಟಿಸದೆ ಹೊರಟಳೇನೋ ಎಂದು ವ್ಯಥೆಯಾಯಿತು. ತನಗೆಂದು ಏನನ್ನೂ ಶೇಖರಿಸದೆ, ಇರುವಾಗಲೇ ಎಲ್ಲವನ್ನೂ ಕೊಟ್ಟು ಹಾಯಾಗಿ ಹೊರಟುಬಿಟ್ಟ ಮಗಳು ಬಾಳಿ ಹೋದ ಪಾಠವನ್ನು ಕಲಿಯಲು ರಾಮಕ್ಕ ಮನಸ್ಸು ಮಾಡಿದ್ದಳು. ಮಕ್ಕಳು , ಸೊಸೆ, ಮೊಮ್ಮಕ್ಕಳೆಲ್ಲಾ ಸೇರಿ ಅಂದು ಹಬ್ಬದ ವಾತಾವರಣ ಮೂಡಿತ್ತು. ಹತ್ತು ಹದಿನೈದು ಸೀರೆಗಳನ್ನು ಅವರಿವರಿಗೆ ಕೊಟ್ಟಿದ್ದರು ಬಿಟ್ಟರೆ ಬಹುಪಾಲು ಸೀರೆಗಳು ಬೀರುವಿನಲ್ಲಿ ಭದ್ರವಾಗಿ ಕೂತಿದ್ದವು. ಬಂದವರಿಗೆಲ್ಲಾ ಅವರಿಗಿಷ್ಟದ ಸೀರೆ ಆಯ್ದುಕೊಳ್ಳುವಂತೆ ಸೂಚಿಸಿ, ಅವರ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ ಹೋದಂತೆ ಅತ್ಯಂತ ಸಂತೃಪ್ತ ಭಾವ ಮೈದುಂಬಿತ್ತು. ಬದುಕು ಮಗ್ಗುಲು ಬದಲಿಸುತ್ತಿತ್ತು. ……..
You cannot copy content of this page