ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬೆಳಕು ಹೊಳೆಯಿತು

ನಾಗರಾಜ್ ಹರಪನಹಳ್ಳಿ

ಆಕಾಶವ ದಿಟ್ಟಿಸಿದೆ
ಅಹಂಕಾರ ಮರೆಯಾಯ್ತು

ಹಕ್ಕಿಗಳ ನೇವರಿಸಿದೆ
ಕನಸುಗಳು ಚಿಗುರೊಡೆದವು

ದಂಡೆ ಬಳಿ ನಡದೆ
ವಿನಯ ಅರ್ಥ ಹೊಳೆಯಿತು

ಅಪ್ಪನ ಸಮಾಧಿ ಬಳಿ ನಿಂತೆ
ಬದುಕಿನ ಕ್ರಿಯಾಶೀಲತೆ ತಾಕಿತು

ಭೂಮಿತಾಯಿಯ ಪಾದಕೆ ಚುಂಬಿಸಿದೆ
ತಾಯ್ತನದ ಅಪ್ಪುಗೆ ಸಿಕ್ಕಿತು

ಅವಳ ಬಳಿ ಬಂದೆ
ಮಾತಾಡಿ ಸಂತೈಸಿ ತಲೆನೇವರಿಸಿ ಕಳಿಸಿಕೊಟ್ಟಳು

ಮಗನ ಬಳಿ ಬಂದು ಕಣ್ಣಲ್ಲಿ ಕಣ್ಣಿಟ್ಟೆ
ಹೊಸ ಬೆಳಕು ಹೊಳೆಯಿತು

ಬಾಗಿಲಲಿ ನಿಂತೆ ನಾನೇ ಕಟ್ಟಿದ
ಗುಬ್ಬಚ್ಚಿ ಗೂಡಿನಿಂದ ಹಕ್ಕಿ ಮರಿ ಕಣ್ಣೊಡೆಯಿತು


About The Author

2 thoughts on “ಬೆಳಕು ಹೊಳೆಯಿತು”

Leave a Reply

You cannot copy content of this page

Scroll to Top