ಬಸವ ಜಯಂತಿಯ ವಿಶೇಷ ಕವಿತೆ ಗುರು ಬಸವ ಕೆ.ಶಶಿಕಾಂತ ಪೀಠ-ಪಟ್ಟವೇರಲಿಲ್ಲ,ಬಿರುದು-ಬಾವಲಿಗೆಳಸಲಿಲ್ಲಸಗ್ಗದ ದೇವತೆಯಂತೂ ಅಲ್ಲಪೂಜೆ-ಪರಾಕು ಬೇಕೇ ಇಲ್ಲಜಗದ ಸೇವೆಗೊಲಿದು ಬಂದಭಕ್ತನೀತ ಬಸವ…. ಭುವಿಯ ಮೇಲೆ ಗುರುಗಳಿಲ್ಲದೀವತೆಗಳಂತೂ ಸಾಧ್ಯವಿಲ್ಲಎಲ್ಲ ಎಲ್ಲ ನಾವೇ ಎಲ್ಲಎನುವ ಡೊಂಬರನುಡಿಯನಳಿದುನೆಲದ ಮೇಲೆ ಭಕ್ತರಿಲ್ಲಜಗವು ಜಂಗಮವಾಗಿಹುದಲ್ಲಇದ್ದರಹುದು ನಾನೇ ಒಬ್ಬಭಕ್ತನೆಂದ ಭೃತ್ಯನೀತ ಬಸವ… ಜಗದ ಕುರುಹನರಿಯದೆಯೂಜಗದ ಗುರು ತಾನೇ ಎಂದುಒರಲಿ ಒರಲಿ ತಮಟೆ ಹೊಡೆವಕೂಗುಮಾರಿ ಕೂಟದಿಗೊಡ್ಡುತನದ ಗಡ್ಡ ಬಿಸುಟುದೊಡ್ಡತನದ ಹಮ್ಮು ಹೊಸೆದುಕಿರಿಯ ತಾನು, ಹಿರಿಯರೆಲ್ಲರೆಂದುನಮಿಪ ಶಿವ ಭಕ್ತ ಪ್ರೇಮಿ ಬಸವ. ಹೆಣ್ಣು,ಹೊನ್ನು,ಮಣ್ಣಿಗೆಳಸಿಹಿರಿಯ ದೈವ ತಾವೇ ಎನಿಸಿಗರುವದಿಂದ ಅಳಿದು ಹೋದಹಿರಿಯನಲ್ಲ ಬಸವ. ಮೂರನಳಿದು,ಆರು ತಿಳಿದುಅಂಗವಳಿದು ಲಿಂಗವಾಗಿಎಲ್ಲರೊಳು ಜಂಗಮವ ಕಾಣ್ವಸಂಗನ ನಿಲುವು ಬಸವಸಕಲ ಜೀವದ ಕುಶಲ ಬಯಸಿಅನ್ಯವನವನಳಿದು ತನ್ನತನಕೆ ಎಳಸಿಇಹದ ಸುಖಕೆ ದಾಸೋಹಿಯಾದಜಗದ ಗುರು ಬಸವ. ದೇವಗಿಂತ ಭಕ್ತ ಮಿಗಿಲುಪದವಿಗಿಂತ ಸೇವೆ ಮಿಗಿಲುಓದಿ ಜಾಣನಾಗೋ ಬದಲುಅರಿದು ಶರಣನಾಗುವದೇ ಮೇಲುಎಂದು ಅರುಹಿ ಜಗವ ಪೊರೆದಆದಿ ಗುರುವು ಬಸವನಮಗೆ ಜಗದ ಗುರು ಬಸವ **************