ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸೊಪ್ಪು ಹೂವೇ….

ಇತ್ತೀಚಿನ ದಿನಗಳಲ್ಲಿ ಪಕ್ಕದ ಹಳ್ಳಿಯಿಂದ ಪ್ರತಿದಿನ ಬರುವ ಸೊಪ್ಪಮ್ಮನೂ ಇಲ್ಲ. ಹೂವಮ್ಮನೂ ಇಲ್ಲ. ಅವರಿಗೆ ಬರುವ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರವೂ ಇಲ್ಲ. ಮನೆ ಬಳಿ ತಲುಪಿದರೂ ಯಾರೂ ಹತ್ತಿರ ಹೋಗಲಾಗದೆ ಒಂದು ರೀತಿ ಅನುಮಾನ. ದೂರದಿಂದಲೇ ಬೇಡವೆಂದು ಕಳಿಸುವ ಅನಿವಾರ್ಯ ಪರಿಸ್ಥಿತಿ..ವ್ಯಾಪಾರವಿಲ್ಲದ ಬದುಕಿನ ಸ್ಥಿತಿಗೆ ಹೂವಮ್ಮಂದಿರು ಉತ್ತರವಿಲ್ಲದೆ ಆಕಾಶ ನೋಡುವಂತಾಗಿದೆ

ಸೊಪ್ಪು ಹೂವೇ…. Read Post »

ಇತರೆ

ಪ್ರೀತಿಗೆ ಒಂದು ಮಿತಿ ಇದೆ ಸ್ನೇಹಕೆ ಎಲ್ಲಿದೆ??

ಅಂದ ಹಾಗೆ ನನ್ನ ಅಣ್ಣನಂತಹ ಗೆಳೆಯನ ಪೂರ್ತಿ ಹೆಸರು ಡಾ. ಶೇಕ್ ಮೊಯರಫ್ ಅಲಿ.. ಆ ಮುದ್ದಾದ ರೂಪದರ್ಶಿಯ ಹೆಸರು ಅಫ್ರಿನ್ ಹಾಗು ಅವಳ ಪುಟ್ಟ ಅಕ್ಕಂದಿರ ಹೆಸರು ಜಾಸ್ಮಿನ್ ಮತ್ತು ನಜ್ನಿನ್.. ಎಲ್ಲರಿಗೂ ರಂಜಾನಿನ ಶುಭಾಶಯಗಳು..

ಪ್ರೀತಿಗೆ ಒಂದು ಮಿತಿ ಇದೆ ಸ್ನೇಹಕೆ ಎಲ್ಲಿದೆ?? Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆಕಾಣದ ಕೈಗಳಿಗೆ ಜೀವಗಳನ್ನೇ ಜಕಾತ್ ನೀಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಬ್ಬಕ್ಕೆ ಕೊಂಡ ಹೊಸ ಬಟ್ಟೆ ಕಫನ್ ಆಗುತ್ತದೆಂದು ನನಗೆ ಗೊತ್ತಿರಲಿಲ್ಲಮುಳುಗಿದ ಚಾಂದ್ ಗಾಗಿ ಇಂತಜಾರ್ ಮಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕತ್ತಲಲ್ಲಿ ತಡವರಿಸುವ ಅರುಣಾ ಗೆ ಶಮೆಯ ಬೆಳಕು ಕಾಣುತ್ತಿದೆಕೈಚೆಲ್ಲಿದ ಅಲ್ಲಾಹುವಿಗೆ ಇನ್ನೂ ಬೇಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ********

ಗಜಲ್ Read Post »

ಕಾವ್ಯಯಾನ

ಗುರು ಬಸವ

ಬಸವ ಜಯಂತಿಯ ವಿಶೇಷ ಕವಿತೆ ಗುರು ಬಸವ ಕೆ.ಶಶಿಕಾಂತ ಪೀಠ-ಪಟ್ಟವೇರಲಿಲ್ಲ,ಬಿರುದು-ಬಾವಲಿಗೆಳಸಲಿಲ್ಲಸಗ್ಗದ ದೇವತೆಯಂತೂ ಅಲ್ಲಪೂಜೆ-ಪರಾಕು ಬೇಕೇ ಇಲ್ಲಜಗದ ಸೇವೆಗೊಲಿದು ಬಂದಭಕ್ತನೀತ ಬಸವ…. ಭುವಿಯ ಮೇಲೆ ಗುರುಗಳಿಲ್ಲದೀವತೆಗಳಂತೂ ಸಾಧ್ಯವಿಲ್ಲಎಲ್ಲ ಎಲ್ಲ ನಾವೇ ಎಲ್ಲಎನುವ ಡೊಂಬರನುಡಿಯನಳಿದುನೆಲದ ಮೇಲೆ ಭಕ್ತರಿಲ್ಲಜಗವು ಜಂಗಮವಾಗಿಹುದಲ್ಲಇದ್ದರಹುದು ನಾನೇ ಒಬ್ಬಭಕ್ತನೆಂದ ಭೃತ್ಯನೀತ ಬಸವ… ಜಗದ ಕುರುಹನರಿಯದೆಯೂಜಗದ ಗುರು ತಾನೇ ಎಂದುಒರಲಿ ಒರಲಿ ತಮಟೆ ಹೊಡೆವಕೂಗುಮಾರಿ ಕೂಟದಿಗೊಡ್ಡುತನದ ಗಡ್ಡ ಬಿಸುಟುದೊಡ್ಡತನದ ಹಮ್ಮು ಹೊಸೆದುಕಿರಿಯ ತಾನು, ಹಿರಿಯರೆಲ್ಲರೆಂದುನಮಿಪ ಶಿವ ಭಕ್ತ ಪ್ರೇಮಿ ಬಸವ. ಹೆಣ್ಣು,ಹೊನ್ನು,ಮಣ್ಣಿಗೆಳಸಿಹಿರಿಯ ದೈವ ತಾವೇ ಎನಿಸಿಗರುವದಿಂದ ಅಳಿದು ಹೋದಹಿರಿಯನಲ್ಲ ಬಸವ. ಮೂರನಳಿದು,ಆರು ತಿಳಿದುಅಂಗವಳಿದು ಲಿಂಗವಾಗಿಎಲ್ಲರೊಳು ಜಂಗಮವ ಕಾಣ್ವಸಂಗನ ನಿಲುವು ಬಸವಸಕಲ ಜೀವದ ಕುಶಲ ಬಯಸಿಅನ್ಯವನವನಳಿದು ತನ್ನತನಕೆ ಎಳಸಿಇಹದ ಸುಖಕೆ ದಾಸೋಹಿಯಾದಜಗದ ಗುರು ಬಸವ. ದೇವಗಿಂತ ಭಕ್ತ ಮಿಗಿಲುಪದವಿಗಿಂತ ಸೇವೆ ಮಿಗಿಲುಓದಿ ಜಾಣನಾಗೋ ಬದಲುಅರಿದು ಶರಣನಾಗುವದೇ ಮೇಲುಎಂದು ಅರುಹಿ ಜಗವ ಪೊರೆದಆದಿ ಗುರುವು ಬಸವನಮಗೆ ಜಗದ ಗುರು ಬಸವ **************

ಗುರು ಬಸವ Read Post »

ಕಾವ್ಯಯಾನ

ಜ್ಞಾನ ಜ್ಯೋತಿಗೆ ಶರಣು

ಬಸವ ಜಯಂತಿಯ ವಿಶೇಷ ಕವಿತೆ ಜ್ಞಾನ ಜ್ಯೋತಿಗೆ ಶರಣು ಪ್ರಭಾವತಿ ಎಸ್ ದೇಸಾಯಿ ಹುಟ್ಟು ಸೂತಕದ ಕುರುಹು ತ್ಯಜಿಸಿದಾತಅರಿವಿನ ಲಿಂಗವ ಕರದೊಳು ಕೊಟ್ಟಾತನರಜನ್ಮಕೆ ಹರಜನ್ಮದ ಅರಿವು ಮೂಡಿಸಿದಾತಭವ ಬಂಧನವ ಬಿಡಿಸಿದಾತಂಗೆ ಶರಣು ಜ್ಞಾನದ ಬೀಜ ಬಿತ್ತಿ,ಅಜ್ಞಾನದ ಕಳೆ ಕಳೆದಾತಲಿಂಗ ಭೇದವ ಅಳಿಸಿ ಸಮಾನತೆ ಹಕ್ಕು ನೀಡಿದಾತಜಾತಿಯ ಅಳಿಸಿ ಜಾತ್ಯಾತೀತ ರಾಷ್ಟ್ರ ನಿಮಿ೯ಸಿದಾತಶೋಷಣೆಯ ಧಿಕ್ಕರಿಸಿದಾತಂಗೆ ಶರಣು ನೊಂದ ಹೃದಯಗಳ ಒಂದು ಗೂಡಿಸಿದಾತಕಾಯಕದಿ ಆಥಿ೯ಕ ಸಮಾನತೆ ಸಾರಿದಾತವೇದ ಉಪನಿಷತ್ತುಗಳ ಭಾಷ್ಯವ ತ್ಯಜಿದಾತವಚನಾನುಭವಾಮೃತವ ಉಣಿಸಿದಾದಂಗೆ ಶರಣು ದೇಹವೇ ದೇವಾಲಯ,ಶಿರವೇ ಹೊನ್ನಕಳಸವೆಂದಾತದಯವೇ ಧರ್ಮದ ಮೂಲವೆಂದಾತಗುರು ಲಿಂಗ ಜಂಗಮ ಗಳ ತ್ರಿಕೂಟ ನಿಮಿ೯ಸಿದಾತದಾಸೋಹವೇ ಸಹ ಬಾಳ್ವೆ ಎಂದಾತಂಗೆ ಶರಣು ಭವದ ವ್ಯವಹಾರಕೆ ದಂಡಾಧೀಶನಾದಾತನುಡಿದಂತೆ ನಡೆದು ಕಾಯಕ ನಿಷ್ಠೆ ತೋರಿಸಿದಾತಶರಣ ಸತಿ ಲಿಂಗಪತಿ ಎಂದು ಭವದಲಿ ಬಾಳಿದಾತಭಕ್ತಿ ಭಂಡಾರಿಯಾದ ಅಣ್ಣ ಬಸವಂಗೆ ಶರಣು ಕಲ್ಯಾಣದಲಿ ಅನುಭವ ಮಂಟಪ ಸ್ಥಾಪಿದಾತಜಗಕೆ ಪ್ರಜಾ ಪ್ರಭುತ್ವದ ಕಲ್ಪನೆ ಹುಟ್ಟಿಸಿದಾತಬಿಜ್ಜಳನ ಅಮಾತ್ಯ ಪದವಿಯ ತ್ಯಜಿಸಿದಾತಭವದಲಿ ಜ್ಞಾನ ಜ್ಯೋತಿ ಬೆಳಗಿಸಿದಾತಂಗೆ ಶರಣು. ****************

ಜ್ಞಾನ ಜ್ಯೋತಿಗೆ ಶರಣು Read Post »

ಕಾವ್ಯಯಾನ

ಸೋಪು, ಸ್ಯಾನಿಟೈಜರ್, ಉಪ್ಪು, ಲಿಂಬೆಹಣ್ಣು
ಇತ್ಯಾದಿಗಳಿಂದ ತೊಳೆಸಿಕೊಂಡು
ಶುಭ್ರವಾಗುತ್ತಿವೆ
ಎಷ್ಟೆಂದರೂ ಜೀವ ಭಯ ಸ್ವಾಮಿ!

Read Post »

You cannot copy content of this page

Scroll to Top